ಮಂಡ್ಯ 7 ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ವಜಾ

Public TV
1 Min Read

ಬೆಂಗಳೂರು: ಮೈತ್ರಿ ಅಭ್ಯರ್ಥಿಯ ವಿರುದ್ಧ ಬಂಡಾಯದ ಸಾರಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ನೀಡಿದ್ದ 7 ಬ್ಲಾಕ್ ಕಾಂಗ್ರೆಸ್ ಅಧಯಕ್ಷರನ್ನ ಕೆಪಿಸಿಸಿ ವಜಾ ಮಾಡಿದೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಂಡ್ಯ ಗ್ರಾಮಾಂತರದ ಹೆಚ್. ಅಪ್ಪಾಜಿ, ಭಾರತಿ ನಗರದ ಎಎಸ್ ರಾಜೀವ್, ಮಳವಳ್ಳಿಯ ಪುಟ್ಟರಾಮು, ಮಳವಳ್ಳಿ ನಗರದ ಕೆಜೆ ದೇವರಾಜು, ನಾಗಮಂಗಲದ ಎಂ ಪ್ರಸನ್ನ, ಕೆಆರ್ ಪೇಟೆಯ ಕೆಆರ್ ರವೀಂದ್ರ ಬಾಬು, ಮೇಲುಕೋಟೆಯ ಎಸ್‍ಬಿ ಪ್ರಕಾಶ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದು, ಮೈತ್ರಿ ಪಕ್ಷದ ಅಭ್ಯರ್ಥಿ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ವಜಾ ಮಾಡಲಾಗಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ. ವೈ. ಘೋರ್ಪಡೆ ಅವರು ವಜಾಗೊಳಿಸಿ ಆದೇಶ ನೀಡಿದ್ದಾರೆ.

ಇತ್ತ ಕಳೆದ ಕೆಲ ದಿನಗಳಿಂದ ಸುಮಲತಾ ಅವರ ಪರ ಪ್ರಚಾರ ನಡೆಸಿದ್ದ ಯಶ್ ಅವರು ನಾಳೆ ಚುನಾವಣಾ ಪ್ರಚಾರದಿಂದ ಬ್ರೇಕ್ ಪಡೆದಿದ್ದಾರೆ. ಸಿನಿಮಾ ಚಿತ್ರೀಕರಣ ಹಿನ್ನೆಲೆಯಲ್ಲಿ ಯಶ್ ಬೆಂಗಳೂರಿಗೆ ಮರಳಲಿದ್ದಾರೆ ಎನ್ನಲಾಗಿದ್ದು, ಪರಿಣಾಮ ಇಂದು ತಡರಾತ್ರಿ ವರೆಗೂ ಪ್ರಚಾರ ನಡೆಸಿದ್ದು, ಶುಕ್ರವಾರದಿಂದ ಮತ್ತೆ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

Share This Article
Leave a Comment

Leave a Reply

Your email address will not be published. Required fields are marked *