ತುರ್ತಾಗಿ 2 ಲಕ್ಷ ರೂ, ಸಾಲ ಕೊಡಿಸು – ವಾಯು ಪುತ್ರನಿಗೆ ಪತ್ರ ಬರೆದ ಭಕ್ತ

Public TV
1 Min Read

– ನನಗೆ ಸರ್ಕಾರಿ ಕೆಲಸದ ಜೊತೆಗೆ ಮದುವೆಯೂ ಆಗಬೇಕು

ಕೊಪ್ಪಳ: ತುರ್ತಾಗಿ 2 ಲಕ್ಷ ರೂಪಾಯಿ ಸಾಲ ಕೊಡಿಸು ಎಂದು ಭಕ್ತನೊರ್ವ ದೇವರಿಗೆ ಪತ್ರ ಬರೆದಿದ್ದಾನೆ.

ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಬೆಟ್ಟದಲ್ಲಿ ಇಂದು ಹುಂಡಿಯಲ್ಲಿರುವ ಹಣವನ್ನು ಎಣಿಸುವ ಕಾರ್ಯ ನೆಡದಿತ್ತು. ಈ ವೇಳೆ ಲಕ್ಷಾಂತರ ರೂಪಾಯಿ ಹಣದ ಜೊತೆಗೆ ಇಬ್ಬರೂ ಭಕ್ತರು ತಮ್ಮ ಕಷ್ಟವನ್ನು ಪತ್ರದ ಮೂಲಕ ಬರೆದು ವಾಯು ಪುತ್ರನಿಗೆ ಮನವಿ ಮಾಡಿರುವ ಪತ್ರಗಳು ಸಿಕ್ಕಿವೆ.

ದೇವರಿಗೆ ಬರೆದ ಒಂದು ಪತ್ರದಲ್ಲಿ ಭಕ್ತ, ನನ್ನ ಮನೆಯ ಕಟ್ಟಡದ ಕೆಲಸ ಪೂರ್ತಿಯಾಗಬೇಕು. ನಾನು ಕಳೆದುಕೊಂಡ ಶಕ್ತಿ ನನಗೆ ವಾಪಸ್ ಬರಬೇಕು. ಕೇಸ್ ನಿಂದ ಮುಕ್ತಿ ಹೊಂದಬೇಕು. ಈ ಸದ್ಯ ನನಗೆ 2 ಲಕ್ಷ ರೂಪಾಯಿ ಸಾಲ ಕೊಡಿಸು ಬೇಕು ಎಂದು ವಾಯು ಪುತ್ರನಿಗೆ ಮನವಿ ಮಾಡಿದ್ದಾನೆ.

ಇದೇ ರೀತಿ ಇನ್ನೊಬ್ಬ ಭಕ್ತನೂ ಸಹ ವಿಭಿನ್ನವಾಗಿ ಮನವಿ ಮಾಡಿದ್ದಾನೆ. ನನಗೆ ಸರ್ಕಾರಿ ಕೆಲಸದ ಜೊತೆಗೆ ಮದುವೆಯೂ ಆಗಬೇಕು ಎಂದು ಮನವಿ ಮಾಡಿ ಪತ್ರ ಬರೆದಿದ್ದಾನೆ. ಒಟ್ಟಾರೆ ವಾಯುಪುತ್ರನಿಗೆ ನೊಂದ ಭಕ್ತರ ಪತ್ರ ವ್ಯವಹಾರದ ಮುಖಾಂತರ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಹಣದ ಜೊತೆ ಪತ್ರಗಳನ್ನು ನೋಡಿದ ದೇವಸ್ಥಾನ ಆಡಳಿತ ಮಂಡಳಿ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *