ಕೊಲ್ಲೂರು ಸನ್ನಿಧಾನದಲ್ಲಿ ಶಿವಮಣಿ ಕಲಾಸೇವೆ

Public TV
1 Min Read

ಉಡುಪಿ: ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದೆ. ವಿಜ್ರಂಭಣೆಯ ಉತ್ಸವದಲ್ಲಿ ದೇಶದ ನಾನಾ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದಾರೆ. ಬ್ರಹ್ಮ ರಥೋತ್ಸವ ನಡೆಯುವ ಮುನ್ನ ದೇವಸ್ಥಾನದ ಪ್ರಾಂಗಣದಲ್ಲಿ ಬಲಿ ಉತ್ಸವ ಸಂದರ್ಭ ಡ್ರಮ್ಮರ್ ಶಿವಮಣಿ ಕಲಾಸೇವೆ ನೀಡಿದರು.

ಡ್ರಮ್ ಮಾಂತ್ರಿಕ ಶಿವಮಣಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದಲ್ಲಿ ಪಾಲ್ಗೊಂಡು ತಮ್ಮ ಸೇವೆಯನ್ನು ನೀಡಿದರು. ವಾಲಗದವರ ಜೊತೆ ಸೇರಿಕೊಂಡು ಡ್ರಮ್ಸ್ ನುಡಿಸಿದರು. ಪ್ರತಿ ವರ್ಷ ಶಿವಮಣಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದು ಕಲಾ ಸೇವೆ ನೀಡುತ್ತಾರೆ. ಈ ಬಾರಿ ಬಲಿ ಉತ್ಸವ ಸಂದರ್ಭ ನಾದಸ್ವರ, ಸಮ್ಮೇಳ, ಡೋಲಿನ ಜೊತೆ ಡ್ರಮ್ಸ್ ಬೀಟ್ ಹಾಕಿದ್ದು ವಿಶೇಷವಾಗಿತ್ತು.

ಎಲ್ಲೂ ಸಾಂಪ್ರದಾಯಿಕ ಲಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಆಧುನಿಕ ಪರಿಕರಗಳೊಂದಿಗೆ ಶಿವಮಣಿ ಕಲಾಶಕ್ತಿಯನ್ನು ಮೆರೆದಿದ್ದಾರೆ. ಉತ್ಸವ ಸಂದರ್ಭ ಶಿವಮಣಿಯನ್ನು, ಅವರ ಕಲಾಸೇವೆಯನ್ನು ನೋಡಲು ಜನ ಜಮಾಯಿಸಿದ್ದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದೇವಳದ ಗಂಗಾಧರ ಬಿಡೆ ಶಿವಮಣಿಯವರು ಪ್ರತೀ ವರ್ಷ ಅಮ್ಮನಲ್ಲಿ ಬಂದು ಸೇವೆ ನೀಡುತ್ತಿದ್ದಾರೆ. ಈ ಬಾರಿಯೂ ಬಂದಿದ್ದಾರೆ. ಮಹಾನ್ ಕಲಾವಿದನಾದರೂ ಸಾಮಾನ್ಯನಂತೆ ಜನಗಳ ಜೊತೆ ಬೆರೆಯುತ್ತಾರೆ. ಸರಸ್ವತಿ ಮಂಟಪದಲ್ಲಿ ತಾಯಿಯ ಮುಂಭಾಗ ನಡೆದ ಸಂಗೀತ ಕಾರ್ಯಕ್ರಮವನ್ನೂ ಬಹಳ ಜನ ಆಸ್ವಾದಿಸಿದ್ದಾರೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *