ಕುರಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ದಂಪತಿ

Public TV
1 Min Read

ಸಾಂದರ್ಭಿಕ ಚಿತ್ರ

ಕೋಲಾರ: ಕೃಷಿ ಹೊಂಡಕ್ಕೆ ಬಿದ್ದ ಕುರಿ ರಕ್ಷಿಸಲು ಹೋಗಿ ವೃದ್ಧ ದಂಪತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೈರಕೂರು ಗ್ರಾಮದ ಬಳಿ ಇಂದು ನಡೆದಿದೆ.

ಬೈರಕೂರು ಗ್ರಾಮದ ಬತ್ಯಪ್ಪ (70) ಹಾಗೂ ವೆಂಕಟಲಕ್ಷ್ಮಮ್ಮ (63) ಮೃತರಾದ ದಂಪತಿ. ಕುರಿ ಮೇಯಿಸಲು ಹೋಗಿದ್ದಾಗ ಘಟನೆ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆಯ ವಿವರ:
ಬತ್ಯಪ್ಪ ಹಾಗೂ ವೆಂಕಟಲಕ್ಷ್ಮಮ್ಮ ಎಂದಿನಂತೆ ಶನಿವಾರ ಕೂಡ ಕುರಿ ಮೇಯಿಸಲು ಹೋಗಿದ್ದಾರೆ. ಬಳಿಕ ಮನೆಗೆ ಬರುವಾಗ ಕೃಷಿ ಹೊಂಡದಲ್ಲಿ ನೀರು ಕುಡಿಯಲು ಕುರಿಗಳನ್ನು ಬಿಟ್ಟಿದ್ದಾರೆ. ಈ ವೇಳೆ ಕುರಿಯೊಂದು ಹೊಂಡದಲ್ಲಿ ಸಿಲುಕಿಕೊಂಡಿದೆ. ಅದನ್ನು ಹೊರ ತೆಗೆಯಲು ಮುಂದಾಗಿದ್ದ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.

ರಾತ್ರಿಯಾದರೂ ಅಪ್ಪ ಅಮ್ಮ ಬರಲಿಲ್ಲ ಅಂತ ಮಕ್ಕಳು ಗಾಬರಿಯಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಕೆರೆಯ ಬಳಿಗೆ ಬಂದು ನೋಡಿದಾಗ ಮೃತ ದೇಹಗಳು ಪತ್ತೆಯಾಗಿವೆ. ಈ ಕುರಿತು ಮಾಹಿತಿ ಪಡೆದ ಸ್ಥಳಕ್ಕೆ ಆಗಮಿಸಿದ ಅಗ್ನಿಶಮಕ ದಳವು ಸ್ಥಳೀಯರ ಸಹಾಯ ಪಡೆದು ಶವಗಳನ್ನು ಹೊರ ತೆಗೆದಿದೆ. ಈ ಕುರಿತು ನಂಗಲಿಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *