ಮೈ ಮುಟ್ಟಿದ ವಕೀಲನಿಗೆ ಚೇರ್, ಕಲ್ಲಿನಿಂದ ಹಲ್ಲೆಗೆ ಮುಂದಾದ ಕೋಲಾರದ ವಕೀಲೆ

Public TV
1 Min Read

ಕೋಲಾರ: ವಕೀಲರಿಬ್ಬರು ಕೋರ್ಟ್ ಆವರಣದಲ್ಲಿ ಹೈಡ್ರಾಮಾ ಮಾಡಿರುವ ಘಟನೆ ಕೆಜಿಎಫ್ ನ್ಯಾಯಾಲಯದ ಮುಂಭಾಗ ನಡೆದಿದೆ.

ತನ್ನ ಮೈ ಮುಟ್ಟಿದ್ದಕ್ಕೆ ವಕೀಲೆಯೊಬ್ಬರು ವಕೀಲನಿಗೆ ಚೇರ್ ಹಾಗೂ ಕಲ್ಲಿನಿಂದ ಹೊಡೆಯಲು ಯತ್ನಿಸಿದ್ದಾರೆ. ವಕೀಲೆ ವೆನಿಲ್ಲಾ, ವಕೀಲ ಬಾಬುವಿಗೆ ಚೇರ್ ಎತ್ತೆಸೆದು ಹಲ್ಲೆಗೆ ಯತ್ನ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ – ನಾಲ್ವರು ಈಜುಪಟುಗಳು ಅರೆಸ್ಟ್

ಸ್ಥಳದಲ್ಲಿ ಇಬ್ಬರು ವಕೀಲರ ಹೈಡ್ರಾಮಾ ಕಂಡು ಜನರು ಕೆಲ ಕಾಲ ಚಕಿತಗೊಂಡಿದ್ದಾರೆ. ಇಬ್ಬರ ಗಲಾಟೆಯನ್ನು ಕಂಡ ಇತರ ವಕೀಲರು ಹಾಗೂ ಸ್ಥಳೀಯರು ಆಕೆಯನ್ನು ಪ್ರಶ್ನೆ ಮಾಡಿದಾಗ ವಕೀಲ ನನ್ನ ಮೈ ಮುಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ರಾಬರ್ಟ್ಸನ್ ಪೇಟೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಇದನ್ನೂ ಓದಿ: ಬ್ಯಾಂಕ್, ಎಟಿಎಂ ಬಾಗಿಲಿನಲ್ಲಿ ಮಲ ವಿಸರ್ಜನೆ ಮಾಡಿ ವಿಕೃತಿ

Share This Article
Leave a Comment

Leave a Reply

Your email address will not be published. Required fields are marked *