ಅದನ್ನೆಲ್ಲ ನೀವು ಕೇಳ್ಬಾರ್ದು, ನಾನು ಹೇಳ್ಬಾರ್ದು ಅದು ಕಾಂಟ್ರವರ್ಸಿ ಆಗುತ್ತೆ – ನಾಗೇಶ್

Public TV
1 Min Read

ಕೋಲಾರ: ಅದನ್ನೆಲ್ಲ ನೀವು ಕೇಳ್ಬಾರ್ದು, ನಾನು ಹೇಳ್ಬಾರ್ದು, ಅದನ್ನು ಸರ್ಕಾರದ ಬಳಿ ಮಾತನಾಡುತ್ತೇನೆ, ನಾನು ಈಗ ಆ ವಿಚಾರ ಮಾತನಾಡಿದರೆ ಕಾಂಟ್ರವರ್ಸಿ ಆಗುತ್ತೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದರು.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷೇತರ ಶಾಸಕರಾಗಿ, ಬಿಜೆಪಿ ಸರ್ಕಾರ ಬರಲು ಪ್ರಮುಖ ಕಾರಣರಾಗಿ ನಿಮಗೆ ಅಬಕಾರಿ ಖಾತೆ ನೀಡಿ ಪೂರ್ಣ ಸ್ವಾತಂತ್ರ್ಯ ನೀಡಿಲ್ಲ ಎನ್ನುವ ಆರೋಪ ನಿಜನಾ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ರೈತರ ಪೂರ್ಣ ಸಾಲಮನ್ನಾ ಸಾಧ್ಯವಿಲ್ಲ ಎನ್ನುವ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಕುರಿತ ಪ್ರಶ್ನೆಗೆ, ರಾಜ್ಯದ ಅಭಿವೃದ್ಧಿ ಕುರಿತು ನನಗೆ ಗೊತ್ತಿಲ್ಲ, ಯಾಕಂದರೆ ನಾನು ಕಳೆದ ಎರಡು ಮೂರು ದಿನದಿಂದ ಟಿವಿ ನೋಡಿಲ್ಲ. ನಿನ್ನೆ ರಾತ್ರಿ ನಾನು ಫಾರ್ಮ್ ಹೌಸ್ ನಲ್ಲಿದ್ದೆ, ನಮ್ಮ ಟಿವಿ ಔಟ್ ಆಫ್ ಸರ್ವೀಸ್ ನಲ್ಲಿದೆ, ಕತ್ತಲಾಗಿಬಿಟ್ಟಿತ್ತು, ಕರೆನ್ಸಿ ಹಾಕಿಸಿಲ್ಲ. 25 ರಂದು ಕೆಡಿಪಿ ಮೀಟಿಂಗ್ ಕರೆದಿದ್ದೇನೆ ಅದಾದ ನಂತರ ಸಿಎಂ ಏನು ಹೇಳಿದ್ದಾರೆ ಎಲ್ಲಾ ವಿಚಾರಗಳ ಕುರಿತು ತಿಳಿದುಕೊಳ್ಳುತ್ತೇನೆ ಎಂದು ಹಾರಿಕೆಯ ಉತ್ತರ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *