ಮುಖ್ಯಶಿಕ್ಷಕರನ್ನ ತರಾಟೆಗೆ ತಗೆದುಕೊಂಡ ಕೋಲಾರ ಸಿಇಓ

Public TV
1 Min Read

ಕೋಲಾರ: ಶಾಲೆಯೊಂದಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಸಿಇಓ ಲತಾಕುಮಾರಿ ಬಿಸಿಯೂಟ ಸೇವಿಸಿ, ಬಳಿಕ ಮುಖ್ಯಶಿಕ್ಷಕರನ್ನು ತರಾಟೆಗೆ ತಗೆದುಕೊಂಡ ಘಟನೆ ಜಿಲ್ಲೆ ಮುಳಬಾಗಿಲು ಪಟ್ಟಣದಲ್ಲಿ ನಡೆದಿದೆ.

ಮುಳುಬಾಗಿಲು ಪಟ್ಟಣದ ಬಳೆ ಚಂಗಪ್ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದ ಸಿಇಓ ಲತಾಕುಮಾರಿ ಅವರು, ಶಾಲೆಯ ಅವ್ಯವಸ್ಥೆ ನೋಡಿ, ಮಕ್ಕಳು ಹೇಗೆ ಊಟ ಮಾಡಬೇಕು. ವಿದ್ಯಾರ್ಥಿಗಳು ಒಂದು ಕಡೆಕುಳಿತು ಊಟ ಮಾಡಲು ವ್ಯವಸ್ಥೆ ಕಲ್ಪಿಸಿಲ್ಲ. ಪಠ್ಯ ಪುಸ್ತಕ, ಸಮವಸ್ತ್ರ ವಿತರಿಸಿಲ್ಲ, ಮುಖ್ಯಶಿಕ್ಷಕರಾಗಿ ನೀವು ಏನು ಮಾಡುತ್ತಿರುವಿರಿ ಎಂದು ತರಾಟೆಗೆ ತಗೆದುಕೊಂಡಿದ್ದಾರೆ.

ಬಿಸಿಯೂಟ ಸೇವಿಸಿ, ಪರಿಶೀಲಿಸಿದ ಸಿಇಓ ಲತಾಕುಮಾರಿ ಅವರು, ಅಡುಗೆಯಲ್ಲಿ ರುಚಿ ಮತ್ತು ಶುಚಿ ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಅಡುಗೆ ಸಹಾಯಕರು ನೆಲದ ಮೇಲೆ ಪಾತ್ರೆ ಇಟ್ಟು ಮಕ್ಕಳಿಗೆ ಊಟ ಬಡಿಸುತ್ತಿದ್ದರು. ಇದರಿಂದ ಸಮಾಧಾನ ವ್ಯಕ್ತಪಡಿಸಿದ ಲತಾಕುಮಾರಿ ಅವರು, ಅಡುಗೆ ಸಹಾಯಕರನ್ನು ಅಮಾನತು ಮಾಡಬೇಕು ಹಾಗೂ ವಿದ್ಯಾರ್ಥಿಗಳಿಗೆ ರುಚಿ ಹಾಗೂ ಶುಚಿಯಾದ ಊಟ ನೀಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು ಎಂದು ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *