ಕೊಡಗು: ಕೊಡವ ಸಮುದಾಯದ ಜನರು ತಮ್ಮ ಸಂಪ್ರದಾಯದಂತೆ ಇಂದು ಸೌರಮಾನ ಯುಗಾದಿಯನ್ನು ಆಚರಿಸಿದರು.
ಕೊಡವ ಸಮುದಾಯದ ಜನ ಈ ಹಬ್ಬವನ್ನು ಹೊಸ ವರ್ಷವಾಗಿ ಆಚರಿಸುತ್ತಾರೆ. ಇಂದು ಗದ್ದೆಯಲ್ಲಿ ಸಾಂಕೇತಿಕವಾಗಿ ಉಳುಮೆ ಮಾಡಿದರೆ ಮುಂದೆ ಕೃಷಿ ಚಟುವಟಿಯಕೆಯಲ್ಲಿ ತೊಡುಗಲು ಶುಭ ದಿನವನ್ನು ಮತ್ತೆ ನೋಡಬೇಕಿಲ್ಲ ಎಂಬುವುದು ಕೊಡವ ಸಮುದಾಯದ ಜನರ ನಂಬಿಕೆ.
ಇಂದು ಎಲ್ಲರೂ `ಎಡಮ್ಯಾರ್ ಒಂದ್’ ಹಬ್ಬವನ್ನು ಆಚರಣೆ ಮಾಡಿದರು. ಕೊಡವರ ಎಲ್ಲ ಆಚರಣೆಗಳ ಮೂಲ ಕೃಷಿ. ಬೆಳಗ್ಗೆ ದೇವರನ್ನು ಪ್ರಾರ್ಥಿಸಿ ಕೊಟ್ಟಿಗೆಯಲ್ಲಿದ್ದ ಎತ್ತುಗಳು ಹಾಗೂ ನೇಗಿಲುಗಳನ್ನು ಪೂಜಿಸಲಾಯಿತು. ಬಳಿಕ ಗದ್ದೆ ಉಳುಮೆ ಮಾಡುವ ಮೂಲಕ ವರ್ಷದ ಉಳುಮೆಗೆ ಚಾಲನೆ ನೀಡಲಾಯಿತು.
ಮಡಿಕೇರಿ ತಾಲೂಕಿನ ಹೋದ್ದೂರು ಗ್ರಾಮದ ಐನ್ ಮನೆಯಲ್ಲಿ ಇಂದು ದೇವರಿಗೆ ಅಕ್ಕಿ ಹಾಕಿ ನಮಿಸಿ, ಗದ್ದೆಯಲ್ಲಿ ಎತ್ತುಗಳನ್ನು ಪೂಜಿಸಲಾಯಿತು.