ಕನಸಿನ ಮನೆಗಳನ್ನು ಬಿಟ್ಟು ಗ್ರಾಮಗಳನ್ನೇ ತೊರೆದ ಗ್ರಾಮಸ್ಥರು

Public TV
1 Min Read

ಮಡಿಕೇರಿ: ಜೀವ ಉಳಿಸಿಕೊಳ್ಳಲು ಕನಸಿನ ಮನೆಗಳನ್ನು ತೊರೆದು ಜನರು ಗ್ರಾಮಗಳನ್ನು ಖಾಲಿ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹದ ಪರಿಣಾಮ ಮಾದಪುರ ಸಮೀಪದ ಗ್ರಾಮಗಳಲ್ಲಿ ಜನರೇ ಇಲ್ಲದೇ ಖಾಲಿಯಾಗುತ್ತಿವೆ.

ಮಾದಪುರ ಸಮೀಪದ ಹೆಮ್ಮಿಯಾಲ, ಹಟ್ಟಿಹೊಳೆ, ಮುಕ್ಕೋಡ್ಲು ಗ್ರಾಮಗಳಲ್ಲಿ ಜನರೇ ಇಲ್ಲ. ಗ್ರಾಮದ ಎಲ್ಲ ಮನೆಗಳಿಗೆ ಬೀಗ ಹಾಕಲಾಗಿದೆ. ಮೂರು ಗ್ರಾಮಗಳಲ್ಲಿ ಮನೆಗಳು ಬಹುತೇಕ ಕುಸಿತವಾಗಿದ್ದು, ಕೆಲಕಡೆ ನೀರು ಸಹ ನುಗ್ಗಿದೆ. ಅಬ್ಬರಿಸಿ ಬೊಬ್ಬಿರಿದು ರೌದ್ರ ನರ್ತನ ತೋರಿದ್ದ ಹಟ್ಟಿಹೊಳೆ ಈಗ ಸ್ವಲ್ಪ ಶಾಂತವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

ಹಟ್ಟಿಹೊಳೆಯಬ ರೌದ್ರ ನರ್ತನದಿಂದಾಗಿ ಮುಕ್ಕೋಡ್ಲು ಗ್ರಾಮದ ಜನರು ಅಪಾಯಕ್ಕೆ ಸಿಲುಕಿದ್ದರು. ಸದ್ಯ ಹಟ್ಟಿಹೊಳೆ ಆರ್ಭಟ ತಗ್ಗಿದ್ದು, ಮುಕ್ಕೋಡ್ಲು ರಸ್ತೆಯಿಂದ ನೀರು ಬಿಟ್ಟಿದೆ. ರಸ್ತೆಯನ್ನ ತಕ್ಕಮಟ್ಟಿಗೆ ದುರಸ್ತಿ ಮಾಡುವ ಕಾರ್ಯಕೂಡ ನಡೆಯುತ್ತಿದೆ. ಮಳೆಯ ಅವಾಂತರಕ್ಕೆ ಮಡಿಕೇರಿಯ ಮಕಂದೂರಿನಲ್ಲಿ ಇಡೀ ಗುಡ್ಡವೇ ಕುಸಿದುಬಿದ್ದಿದ್ದು ಸುಮಾರು 40ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ. ಸರ್ಕಾರ ನಮ್ಮೆಲ್ಲಾ ಮನೆಗಳನ್ನು ನಿರ್ಮಾಣ ಮಾಡಿಕೊಡಲಿ ಅಂತ ಅಲ್ಲಿಯ ಸ್ಥಳಿಯರು ಮನವಿ ಮಾಡಿಕೊಳ್ಳುತ್ತಿದ್ದಾರೆ.

https://youtu.be/cOn-LBN3Qr4

 

Share This Article
Leave a Comment

Leave a Reply

Your email address will not be published. Required fields are marked *