ರಾಜ್ಯ ಸರ್ಕಾರದಿಂದ ಕೊಡಗಿನ 4257 ರೈತರ ಸಾಲಮನ್ನಾ

Public TV
1 Min Read

ಮಡಿಕೇರಿ: ಸಹಕಾರಿ ಸಾಲಾ ಮನ್ನಾ ಯೋಜನೆಯಡಿ ಜಿಲ್ಲೆಯ 4,257 ರೈತರ 32.64 ಕೋಟಿ ರೂ. ಸಾಲದ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ್ದು ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರ ಮೊಗದಲ್ಲಿ ಇದೀಗ ಮಂದಹಾಸ ಮೂಡಿದೆ.

ಈ ಬಗ್ಗೆ ಡಿಸಿಸಿ ಬ್ಯಾಂಕ್ ತಿಳಿಸಿದ್ದು, 2018ರಲ್ಲಿ ಘೋಷಿಸಿದ ಸಾಲಮನ್ನಾದ 32,903 ರೈತರು ಫಲಾನುಭವಿಗಳು ಜಿಲ್ಲೆಯಲ್ಲಿದ್ದರೂ 254.81 ಕೋಟಿ ಹಣವನ್ನು ಬಿಡುಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಹಿಂದಿನ ಸರ್ಕಾರ ಈಗಾಗಲೇ 10,421 ರೈತರ 68.45 ಕೋಟಿ ಹಣವನ್ನು ಬಿಡುಗಡೆಗೊಳಿಸಿ ಸಾಲಮನ್ನಾಕ್ಕೆ ಅರ್ಹರೆಂದು ಪರಿಗಣಿಸಿತ್ತು.

16,673 ರೈತರ ಪೈಕಿ 6,252 ರೈತರ 48.25 ಕೋಟಿ ರೂ. ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿತ್ತು. ಸಾಲ ಮನ್ನಾಕ್ಕೆ ಅರ್ಹತೆ ಪಡೆದಿರುವ ಜಿಲ್ಲೆಯ 16,673 ರೈತರ ಪೈಕಿ ಈ ವರೆಗೂ ಬಾಕಿ ಉಳಿಸಿಕೊಂಡಿದ್ದ 6,252 ರೈತರ 48.25 ಕೋಟಿ ರೂ. ಮೊತ್ತದಲ್ಲಿ 4,257 ರೈತರಿಗೆ ಸಂಬಂಧಿಸಿದ 32.64 ಕೋಟಿ ರೂ. ಹಣವನ್ನು ಸೆ.13 ರಂದು ಫಲಾನುಭವಿ ರೈತರ ಖಾತೆಗೆ ಬಿಡುಗಡೆಗೊಳಿಸಲಾಗಿದೆ.

ಈ ಬಗ್ಗೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಪಬ್ಲಿಕ್ ಟಿವಿಯೊಂದಿಗೆ ಮಾತಾನಾಡಿ ಸರ್ಕಾರ ಹಣ ಬಿಡುಗಡೆ ಮಾಡಿದೆ. ಸುಮಾರು 25% ರೈತರ ಅಕೌಂಟ್ ಗೆ ಜಮೆ ಯಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಪ್ರಕೃತಿಕ ವಿಕೋಪಕ್ಕೆ ನಲುಗಿ ಹೋಗಿದ ಕೊಡಗಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

Share This Article
Leave a Comment

Leave a Reply

Your email address will not be published. Required fields are marked *