ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ಕು ಕಾಡಾನೆಗಳು ಸಾವು

Public TV
1 Min Read

ಮಡಿಕೇರಿ: ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ಕು ಕಾಡಾನೆಗಳು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ನಡೆದಿದೆ.

ವಿರಾಜಪೇಟೆ ತಾಲೂಕು ಕಣ್ಣಂಗಾಲ ಗ್ರಾಮದ ಕಾಫಿ ತೋಟವೊಂದರಲ್ಲಿ ಮಳೆಯಿಂದಾಗಿ ತುಂಡಾಗಿ ಬಿದ್ದಿದ ವಿದ್ಯುತ್ ಲೈನ್ ತುಳಿದ ಕಾಡಾನೆಗಳು ಧಾರುಣವಾಗಿ ಸಾವನ್ನಪ್ಪಿದೆ. ಅಂದಾಜು 36 ಹಾಗೂ 28 ವರ್ಷದ 2 ಆನೆಗಳು ಮತ್ತು 2 ವರ್ಷ ಮತ್ತು 6 ವರ್ಷದ ಮರಿಯಾನೆಗಳು ಮೃತಪಟ್ಟಿವೆ.

ಇನ್ನು ಇದೇ ಜೂನ್ 14 ರಂದು ಇದೇ ಗ್ರಾಮದಲ್ಲಿ ಎರಡು ಕಾಡಾನೆಗಳು ವಿದ್ಯುತ್ ಶಾಕ್ ನಿಂದ ಸಾವಿಗೀಡಾಗಿದ್ದವು. 15 ದಿನಗಳ ಅಂತರದಲ್ಲಿ ಒಟ್ಟು 6 ಅನೆಗಳು ವಿದ್ಯುತ್ ಶಾಕ್ ಗೆ ಬಲಿಯಾಗಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *