ಮತ್ತೊಮ್ಮೆ ತಂದೆಯ ಅಧಿಕಾರ ದುರುಪಯೋಗಪಡಿಸಲು ಮುಂದಾದ ಸಚಿವ ಕೆ.ಜೆ ಜಾರ್ಜ್ ಪುತ್ರ!

Public TV
1 Min Read

ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಪುತ್ರ ರಾಣಾ ಜಾರ್ಜ್, ತಮ್ಮ ತಂದೆಯ ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದಾರೆ.

ರಾಣಾ ಜಾರ್ಜ್ ಕಾಡಿನಲ್ಲಿ ಸುತ್ತಾಡಿಕೊಂಡು ಮಜಾ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದು, ಕಾಡಿನ ರಾಜನಾಗಿ ಮೆರದಾಡುತ್ತಿದ್ದ ವಿಚಾರ ಈ ಹಿಂದೆ ಸುದ್ದಿಯಾಗಿತ್ತು. ಇದೀಗ ಮತ್ತೆ ಅರಣ್ಯದೊಳಗೆ ತನ್ನ ರೇಂಜ್ ರೋವರ್ ಕಾರಿನಲ್ಲಿ ಸವಾರಿ ಮಾಡೋಕೆ ಅನುಮತಿ ಕೇಳಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಹೈ ಇನ್ ಪ್ಲ್ಯೂಯೆನ್ಸ್ ಮಾಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗೆ ಸಚಿವ ಕೆ.ಜೆ. ಜಾರ್ಜ್ ರಾಜನಾದ್ರೆ, ಮಗ ಕಾಡಿಗೆ ರಾಜ!

ಸ್ವಂತ ವಾಹನದಲ್ಲಿ ಪರ್ಮನೆಂಟ್ ಆಗಿ ಸಂಚಾರ ಮಾಡಲು ಅನುಮತಿ ನೀಡಬೇಕು ಅಂತ ಅರಣ್ಯ ಇಲಾಖೆಗೆ ಕೋರಿರುವ ಪತತಿದೀಗ ಪಬ್ಲಿಕ್ ಟಿವಿಗೆ ಲಭಿಸಿದೆ. ಅರಣ್ಯ ಇಲಾಖೆಯ ಬೋರ್ಡ್ ಮೆಂಬರ್ ಆಗಿರುವ ರಾಣಾ, ಈ ಹಿಂದೆ ಸ್ನೇಹಿತರ ಜೊತೆ ಕಾಡಿನೊಳಗೆ ಹೋಗಿ ಎಣ್ಣೆ ಪಾರ್ಟಿ ಮಾಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಇದಕ್ಕೂ ಮೊದಲು ಜಾರ್ಜ್ ಗೃಹಸಚಿವರಾಗಿದ್ದಾಗ ರಾಣಾ ತನ್ನ ತಂದೆ ಮಿನಿಸ್ಟರ್ ಅನ್ನೋ ದರ್ಪದಿಂದ ತನ್ನ ತಾಯಿ ಹಾಗೂ ಸ್ನೇಹಿತರೊಂದಿಗೆ ಬಂಡೀಪುರ ಅರಣ್ಯದೊಳಗೆ ಸ್ವಂತ ವಾಹನ ನುಗ್ಗಲು ಯತ್ನಿಸಿದ್ರು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಇವ್ರ ಮಾತಿಗೆ ಸೊಪ್ಪು ಹಾಕಿರಲಿಲ್ಲ. ಆ ವೇಳೆ ಅಧಿಕಾರಿಗಳ ಬಳಿ ಚಾಲೆಂಜ್ ಮಾಡಿದ್ದ ರಾಣಾ ಜಾರ್ಜ್, ನನ್ನನ್ನೇ ಬಿಡಲ್ಲ ಅಂತೀರಾ, ಮುದೊಂದು ದಿನ ನಿಮ್ಮ ಕಣ್ಣೆದುರೇ ನನ್ನ ವಾಹನದಲ್ಲಿ ಸವಾರಿ ಮಾಡ್ತೀನಿ ನೋಡ್ತಾ ಇರಿ ಅಂತಾ ತೊಡೆ ತಟ್ಟಿ ಬಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *