ಸಾಮಾನ್ಯ ಜನರಂತೆ ರೈಲಲ್ಲಿ ಪ್ರಯಾಣಿಸಿದ ಮೈಸೂರಿನ ರಾಜ ರಾಣಿ!

Public TV
1 Min Read

ಮೈಸೂರು: ಯದುವಂಶದ ಮಹಾರಾಜ ಮತ್ತು ಮಹಾರಾಣಿ ಇವತ್ತು ರೈಲಿನಲ್ಲಿ ಸಾಮಾನ್ಯರಂತೆ ಪ್ರಯಾಣ ಮಾಡಿದರು. ತುಂಬು ಗರ್ಭಿಣಿಯಾಗಿರುವ ಮಹಾರಾಣಿ ತ್ರಿಷಿಕಾ ಕುಮಾರಿ ಸಿಂಗ್ ಇಷ್ಟು ದಿನ ತವರು ಮನೆಯಲ್ಲಿದ್ದರು. ದಸರಾ ಪ್ರಯುಕ್ತ ಇವತ್ತು ಬೆಂಗಳೂರಿನಿಂದ ಮೈಸೂರಿಗೆ ಶತಾಬ್ದಿ ರೈಲಿನಲ್ಲಿ ಆಗಮಿಸಿದ್ದಾರೆ.

ಯದುವೀರ್ ಕುಟುಂಬಸ್ಥರೊಂದಿಗೆ ತ್ರಿಷಿಕಾ ಕುಮಾರಿ ಅವರು ಇಂದು ನಗರಕ್ಕೆ ಆಗಮಿಸಿದರು. ತುಂಬು ಗರ್ಭಿಣಿಯಾಗಿರುವ ತ್ರಿಷಿಕಾ ಅವರನ್ನು ಕರೆತರಲು ಯದುವೀರ್ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರು ಮೈಸೂರು ರಸ್ತೆಯಲ್ಲಿ ಕಾರಿನ ಪ್ರಯಾಣ ಸುರಕ್ಷಿತವಲ್ಲ ಎಂದು ರೈಲಿನಲ್ಲಿ ಸಾಮಾನ್ಯರಂತೆ ಎಸಿ ಬೋಗಿಯಲ್ಲಿ ಎಲ್ಲರೊಂದಿಗೆ ಕುಳಿತು ಪ್ರಯಾಣಿಸಿದ್ದಾರೆ.

ಇನ್ನೂ ರೈಲಿನಲ್ಲಿ ಮೈಸೂರಿನಮ ಮಹಾರಾಜ ಮತ್ತು ಮಹಾರಾಣಿಯನ್ನು ಕಂಡ ಸಹ ಪ್ರಯಾಣಿಕರು ಆಶ್ಚರ್ಯದಿಂದ ನೋಡಿದ್ದಾರೆ. ರೈಲಿನಲ್ಲಿ ಮೈಸೂರು ನಗರಕ್ಕೆ ಬಂದ ತ್ರಿಷಿಕಾ ವಿಶ್ವಪ್ರಸಿದ್ಧ ದಸರಾದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ನಾಡಹಬ್ಬ ದಸರಾಗೆ ಭರ್ಜರಿ ತಯಾರಿ ನಡೆಸಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *