ಸದ್ಯದಲ್ಲೇ ಗುಡ್ ನ್ಯೂಸ್ ಕೊಡಲಿದ್ದಾರೆ ಕಿಚ್ಚ ಸುದೀಪ್

Public TV
2 Min Read

ವಿಕ್ರಾಂತ್ ರೋಣ ಸಿನಿಮಾದ ನಂತರ ಕಿಚ್ಚ ಸುದೀಪ್ ಯಾವ ಮತ್ತು ಯಾರ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಈವರೆಗೂ ಸುದೀಪ್ ಈ ವಿಷಯದ ಕುರಿತು ಮಾತೂ ಆಡಿಲ್ಲ. ಹಾಗಾಗಿ ಯಾರ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ ಎನ್ನುವ ಪ್ರಶ್ನೆ ಮೂಡಿತ್ತು. ಅಲ್ಲದೇ, ಹೊಸ ಸಿನಿಮಾವನ್ನು ಯಾವಾಗ ಅನೌನ್ಸ್ ಮಾಡುತ್ತಾರೆ ಎಂದು ಕಾಯುವಿಕೆಯೇ ಹೆಚ್ಚಾಗಿತ್ತು. ಕೊನೆಗೂ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾದ ನಂತರ ಮತ್ತೆ ಅನೂಪ್ ಭಂಡಾರಿ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಅಲ್ಲದೇ, ನಂದಕಿಶೋರ್ ಕೂಡ ಸುದೀಪ್ ಗಾಗಿ ಒಂದು ಸಿನಿಮಾ ಮಾಡಬೇಕಿದೆ. ರಕ್ಷಿತ್ ಶೆಟ್ಟಿ ಜೊತೆಯೂ ಸುದೀಪ್ ಒಂದು ಚಿತ್ರವನ್ನು ಮಾಡಬೇಕಿದೆ. ಈ ನಡುವೆ ಸ್ವತಃ ಸುದೀಪ್ ಅವರೇ ಸಲ್ಮಾನ್ ಖಾನ್ ಗಾಗಿ ಒಂದು ಚಿತ್ರವನ್ನು ಮಾಡಲಿದ್ದಾರೆ ಎಂದೂ ಹೇಳಲಾಗಿತ್ತು. ಇವುಗಳಲ್ಲಿ ಮೊದಲು ಯಾವುದು ಆಗಲಿದೆ ಎನ್ನುವುದು ಅಭಿಮಾನಿಗಳ ಮುಂದಿರುವ ಪ್ರಶ್ನೆ. ಇದನ್ನೂ ಓದಿ: ಸತತ ಸೋಲಿನಿಂದ ಬೇಸತ್ತ ಪೂಜಾಗೆ ನಿರ್ದೇಶಕ ತ್ರಿವಿಕ್ರಮ್ ಸಲಹೆ

ತಮ್ಮ ಹೊಸ ಸಿನಿಮಾದ ಬಗ್ಗೆ ಮಾತನಾಡಿರುವ ಸುದೀಪ್, ಸದ್ಯದಲ್ಲೇ ಹೊಸ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ. ‘ನಾನು ವಿಶ್ರಾಂತಿಯಲ್ಲಿ ಇದ್ದೇನೆ ಎಂದು ಭಾವಿಸಬೇಕಿಲ್ಲ. ಹಲವಾರು ಕಥೆಗಳನ್ನು ಕೇಳುತ್ತಿದ್ದೇನೆ. ನನಗೆ ಎಕ್ಸೈಟ್ ಕೊಡುವಂಥ, ಈ ಪಾತ್ರವನ್ನು ನಾನು ಮಾಡಬಲ್ಲೆ ಎಂದು ಕಿಕ್ ಕೊಡುವಂತಹ ಸ್ಕ್ರಿಪ್ಟ್ ಆಯ್ಕೆಯಾದ ತಕ್ಷಣವೇ ಅಭಿಮಾನಿಗಳ ಜೊತೆ ಅದನ್ನು ಹಂಚಿಕೊಳ್ಳುತ್ತೇನೆ’ ಎಂದಿದ್ದಾರೆ ಸುದೀಪ್.

ಸುದೀಪ್ ಅವರ ಆಪ್ತರು ಹೇಳುವಂತೆ, ಮೂರ್ನಾಲ್ಕು ಕಥೆಗಳನ್ನು ಸುದೀಪ್ ಆಯ್ಕೆ ಮಾಡಿಕೊಂಡಿದ್ದಾರಂತೆ. ಆದರೆ, ಯಾವ ಕಥೆಯನ್ನು ಮೊದಲು ಮಾಡಬೇಕು ಎನ್ನುವ ಕುರಿತು ಚರ್ಚೆ ನಡೆದಿದೆ. ಈ ಸಲ ಅಭಿಮಾನಿಗಳ ಮುಂದೆ ನಿರ್ದೇಶಕನಾಗಿ ನಿಲ್ಲಬೇಕಾ? ಅಥವಾ ನಟನಾಗಿ ಸಿಹಿ ಸುದ್ದಿ ಕೊಡಬೇಕಾ ಎನ್ನುವ ಗೊಂದಲ ಕೂಡ ಇದೆಯಂತೆ. ಏನೇ ಇರಲಿ, ಸದ್ಯದಲ್ಲೇ ಸುದೀಪ್ ಭರ್ಜರಿ ಸುದ್ದಿಯನ್ನೇ ಕೊಡಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *