ಕಳೆದ ಕೆಲ ದಿನಗಳಿಂದ ಮಳೆಯಿಂದಾಗಿ ಬೆಂಗಳೂರು ಮಾತ್ರವಲ್ಲದೇ ಹಲವೆಡೆ ತೊಂದರೆಯಾಗಿದೆ. ಸಾಕಷ್ಟು ಜನ ಮಳೆಯಿಂದ ತತ್ತರಿಸಿದ್ದಾರೆ. ಅಗತ್ಯ ವಸ್ತುಗಳಿಗೂ ಪರದಾಡುವಂತೆ ಆಗಿದೆ. ಇದೀಗ ಬೆಂಗಳೂರಿನ ಮಳೆ ಸಂತ್ರಸ್ತರಿಗೆ ಕಿಚ್ಚ ಸುದೀಪ್ (Kiccha Sudeep) ನೆರವು ನೀಡಿದ್ದಾರೆ.
ಮಳೆಯಿಂದಾಗಿ ಮನೆಗೆ ನೀರು ನುಗ್ಗಿ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಗತ್ಯ ವಸ್ತುಗಳಿಗಾಗಿ ಪರಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಸಂತ್ರಸ್ತರಿಗೆ ಅಗತ್ಯ ಆಹಾರ, ಸಾಮಾಗ್ರಿಗಳನ್ನ ವದಗಿಸುವ ಮೂಲಕ ಸುದೀಪ್ ನೆರವಿನ ಹಸ್ತ ಚಾಚಿದ್ದಾರೆ. ಇದನ್ನೂ ಓದಿ:ಅಪ್ಪು ಅದೊಂದು ಕನಸು ನನಸು ಮಾಡಬೇಕಿತ್ತು ಎಂದು ‘ನಾ ನಿನ್ನ ಮರೆಯಲಾರೆ’ ಸಿನಿಮಾ ನೆನಪಿಸಿದ ರಮ್ಯಾ
ಕಿಚ್ಚ ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ (Kiccha Sudeep Charitable Trust) ಮೂಲಕ ಸಂಕಷ್ಟಕ್ಕೆ ಸಿಲುಕಿದವರಿಗೆ ಸುದೀಪ್ ಮತ್ತು ಟೀಂ ನೆರವು ನೀಡಿದ್ದಾರೆ. ಅಗತ್ಯ ಆಹಾರ ಮತ್ತು ಸಾಮಾಗ್ರಿ ವದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.