ಕಿಚ್ಚ ಸುದೀಪ್ ಅವರನ್ನು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿವೆ ಎನ್ನುವ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡಿತ್ತು. ಈ ಸುದ್ದಿಗೆ ಪೂರಕ ಎನ್ನುವಂತೆ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರು ಸುದೀಪ್ ಮನೆಗೆ ಭೇಟಿ ನೀಡಿದ್ದರು. ಅಲ್ಲದೇ ರಮ್ಯಾ ಮೂಲಕವೂ ಕಿಚ್ಚನನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದೂ ಹೇಳಲಾಗಿತ್ತು.
ಒಂದು ಕಡೆ ಕಾಂಗ್ರೆಸ್ ಪಕ್ಷ ನಿರಂತರವಾಗಿ ಪ್ರಯತ್ನ ಮಾಡುತ್ತಿರುವಾಗ ಬಿಜೆಪಿ ಸುಮ್ಮನೆ ಕೂತಿರಲಿಲ್ಲ. ಸಚಿವ ಕೆ.ಸುಧಾಕರ್ ಸೇರಿದಂತೆ ಹಲವರು ಸುದೀಪ್ ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿದರು. ಆದರೆ, ಈ ಕುರಿತು ಸುದೀಪ್ ಯಾವುದೇ ಪ್ರತಿಕ್ರಿಯೆ ಕೂಡ ನೀಡಿರಲಿಲ್ಲ. ರಾಜಕಾರಣಿಗಳು ಭೇಟಿಯಾದ ಸಂದರ್ಭದಲ್ಲೂ ಇದು ರಾಜಕೀಯ ಭೇಟಿ ಅಲ್ಲವೆಂದೇ ಹೇಳುತ್ತಿದ್ದರು. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋದ್ಯಮದ ಪ್ರಶಸ್ತಿಗೆ ಭಾಜನರಾದ ರಿಷಬ್ ಶೆಟ್ಟಿ
ಆದರೆ, ಇದೇ ಮೊದಲ ಬಾರಿಗೆ ರಾಜಕಾರಣದ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ಎರಡೂ ಪಕ್ಷಗಳು ತಮ್ಮನ್ನು ಸಂಪರ್ಕಿಸಿರುವುದು ನಿಜವೆಂದು ತಿಳಿಸಿದ್ದಾರೆ. ‘ಮನೆಗೆ ಬಂದಿರುವ ವಿಚಾರವನ್ನು ತೇಲಿಸಲು ಹೋಗುವುದಿಲ್ಲ. ರಾಜಕಾರಣಿಗಳು ಮನೆಗೆ ಬಂದಿದ್ದಾರೆ ಅಂದರೆ, ಕಾರಣ ರಾಜಕಾರಣವೇ ಇರುತ್ತದೆ. ಮಾತನಾಡಿದ್ದಾರೆ. ಅಂತಹ ಸಂದರ್ಭ ಬಂದರೆ, ನಾನೇ ಉತ್ತರಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಸಮಾಜಕ್ಕೆ ಒಳ್ಳೆಯದನ್ನು ಮಾಡಲು ರಾಜಕೀಯಕ್ಕೆ ಹೋಗಬೇಕಿಲ್ಲ ಎಂದು ಹಲವಾರು ಬಾರಿ ಹೇಳಿರುವ ಸುದೀಪ್, ಈ ಬಾರಿಯೂ ಅದನ್ನೇ ಮಾತನಾಡಿದ್ದಾರೆ. ಸದ್ಯಕ್ಕಂತೂ ರಾಜಕಾರಣಿ ಆಗುವ ಯಾವ ಆಸೆಯೂ ಇಲ್ಲ ಎಂದಿರುವ ಅವರು, ಹಾಗೊಂದು ವೇಳೆ ಹೋಗಲೇಬೇಕು ಅನಿಸಿದಾಗ ನೋಡೋಣ ಎಂದೂ ಅವರು ಮಾತನಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k