ಲಾರಿಗೆ ವ್ಯಾನ್ ಡಿಕ್ಕಿ – 4 ಮೀನುಗಾರರು ಸಾವು

Public TV
1 Min Read

ತಿರುವನಂತಪುರಂ: ಮಂಗಳವಾರ ಮುಂಜಾನೆ ಲಾರಿಗೆ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಮೀನುಗಾರರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡ ಘಟನೆ ಕೇರಳದ ಕೊಲ್ಲಂನಲ್ಲಿ ಸಂಭವಿಸಿದೆ.

ಕರುಣಾಂಬರಂ (56) ಮತ್ತು ಬಾರ್ಕುಮಾನ್ಸ್ (45), ಜಸ್ಟಿನ್ (56) ಮತ್ತು ತಮಿಳುನಾಡು ಮೂಲದ ಬಿಜು (35) ಮೃತ ದುರ್ದೈವಿಗಳು. ಮೀನುಗಾರರು ಮೀನುಗಾರಿಕೆಗಾಗಿ ವಿಝಿಂಜಂನಿಂದ ಬೇಪೂರ್‍ಗೆ ತೆರಳುತ್ತಿದ್ದ ವ್ಯಾನ್ ನಿಂದಕರ್ ಕಡೆಗೆ ಮೀನು ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಸಿಎಂ ಬದಲಾವಣೆ ಕೇವಲ ಊಹಾಪೋಹ: ನಳಿನ್‍ ಕುಮಾರ್ ಕಟೀಲ್

ವ್ಯಾನ್‍ನಲ್ಲಿ 34 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡವರನ್ನು ಕರುನಾಗಪಲ್ಲಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕನಿಷ್ಠ 12 ಮಂದಿ ತಮಿಳುನಾಡು ಮೂಲದವರಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ:  ನೈಟ್ ಕರ್ಫ್ಯೂ – ಸರ್ಕಾರದ ವಿರುದ್ಧ ಹೋಂಸ್ಟೇ, ರೆಸಾರ್ಟ್ ಮಾಲೀಕರ ಅಸಮಾಧಾನ

ಗಾಯಗೊಂಡ ಇಬ್ಬರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *