ಬೈರತಿ ಸುರೇಶ್ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು

Public TV
1 Min Read

ಬೆಂಗಳೂರು: ನಗರದ ಹೆಬ್ಬಾಳ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ವಿರುದ್ಧ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ದಾಖಲೆ ಸಮೇತ ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ್ದಾರೆ.

katta subramanya naidu

ಮೊಯ್ಲಿಗಿಂತ ಅತಿದೊಡ್ಡ ಸುಳ್ಳುಗಾರ ಸುರೇಶ್. ನನ್ನ ಕೆಲಸಗಳನ್ನು ತನ್ನ ಕೆಲಸ ಅಂತ ಬಿಂಬಿಸುತ್ತಿದ್ದಾರೆ. 4 ವರ್ಷದಲ್ಲಿ ಭ್ರಷ್ಟಾಚಾರವೇ ಇವರ ಸಾಧನೆ. ಬಿಜೆಪಿ ಸರ್ಕಾರ ನೀಡಿರುವ ಎಲ್ಲಾ ಕಾಮಗಾರಿಗಳಲ್ಲಿ ಸುರೇಶ್ ಅವರಿಗೆ 20-30 ಪರ್ಸೆಂಟ್ ಕಮಿಷನ್ ಕೊಡ್ಬೇಕು ಅಂತ ಗುತ್ತಿಗೆದಾರರು ಹೇಳ್ತಿದ್ದಾರೆ. ನಗರೋತ್ಥಾನ ಅನುದಾನದಲ್ಲಿ 450 ಕೋಟಿ ಕಮಿಷನ್ ಹೊಡೆದಿದ್ದಾರೆ. 650 ಕೋಟಿ ರೂ. ಕಾಮಗಾರಿಗಳಲ್ಲಿ ಶೇ.60ರಷ್ಟು ಕೆಲಸ ಆಗಿಲ್ಲ ಬಗ್ಗೆ ಎಸಿಬಿ ತನಿಖೆ ನಡೆಸಬೇಕು ಎಂದು ಸಿಎಂಗೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಹಿಜಬ್ ಕಿಚ್ಚು – ವಿವಾದಿತ ವಿದ್ಯಾರ್ಥಿನಿಯರ ಮೂಲಕ CFI ಗರ್ಲ್ಸ್‌ ಕಾನ್ಫರೆನ್ಸ್

ಲಡ್ಡು ತಿಂದಂಗೆ ಕಮಿಷನ್ ತಿಂದಿರೋ ಸುರೇಶ್‍ಗೆ ಈ ಬಾರಿ ಜನ ಬೇವಿನ ಲಡ್ಡು ತಿನ್ನಿಸ್ತಾರೆ ಅಂತ ಏಕವಚನದಲ್ಲೇ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಾಗ್ದಾಳಿ ನಡೆಸಿದ್ದಾರೆ. ಆ ಬಳಿಕ 15 ಪ್ರಶ್ನೆ ಮುಂದಿಟ್ಟು ಮಾಧ್ಯಮ ಪ್ರಕಟಣೆ ಹೊರಡಿಸಿದ ಬೈರತಿ ಸುರೇಶ್, ನಿಮ್ಮ ವಿರುದ್ಧದ ಕೇಸ್‍ಗಳು ಏನಾಗಿವೆ? ಎಂದು ಕೇಸ್‍ಗಳ ಡೀಟೇಲ್ಸ್ ಹಾಕಿದ್ದಾರೆ. ಇದಕ್ಕೆ ಕಿಡಿಕಾರಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ನಾನು ಮಾತ್ರ ಬೇಲ್ ಮೇಲಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿಕೆಶಿ ಎಲ್ಲರೂ ಬೇಲ್ ಮೇಲೆ ಇಲ್ವಾ? ಸುರೇಶ್ ನನ್ನ ಎಷ್ಟು ಕೇಸ್‍ಗೆ ಬೇಲ್ ಕೊಟ್ಟಿದ್ದಾನೆ ಅಂತ ಏಕವಚನದಲ್ಲಿ ಕಿಡಿಕಾರಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *