ನೀರನ್ನು ಅರಸಿ ನಾಡಿಗೆ ಬಂದ ಕಾಳಿಂಗ: ವಿಡಿಯೋ ನೋಡಿ

Public TV
1 Min Read

ಕಾರವಾರ: ನೀರಿಗಾಗಿ ಹಾಹಾಕಾರ ಕೇವಲ ಜನರಿಗೆ ಮಾತ್ರವಲ್ಲ ಕಾಡಿನಲ್ಲಿರುವ ಉರಗಗಳು ಇದಕ್ಕೆ ಹೊರತಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ನೀರನ್ನು ಅರಸಿ ನಾಡಿಗೆ ಹಾವುಗಳು ಲಗ್ಗೆ ಇಡುತ್ತಿದೆ.

ಇಂದು ನೀರನ್ನು ಅರಸಿ ಕಾಡಿನಿಂದ 12 ಅಡಿ ಉದ್ದದ ಕಾಳಿಂಗ ಸರ್ಪ ವೊಂದು ಕಾರವಾರ ತಾಲೂಕಿನ ಕೈಗಾ ಟೌನ್ ಷಿಪ್ ಗೆ ಬಂದಿದ್ದು ಜನರಲ್ಲಿ ಆತಂಕ ಮೂಡಿಸಿತ್ತು. ಈ ಕಾಳಿಂಗ ಸರ್ಪ ವನ್ನು ಉರಗ ತಜ್ಞರಾದ ರಾಘವೇಂದ್ರ ಹಾಗೂ ಅರಣ್ಯಾಧಿಕಾರಿ ಸಿ.ಎನ್ ನಾಯ್ಕ ರವರು ರಕ್ಷಿಸಿ ಬಾಯಾರಿದ ಕಾಳಿಂಗಕ್ಕೆ ನೀರನ್ನು ಕುಡಿಸಿ ಅಣಶಿ ಅಭಯಾರಣ್ಯಕ್ಕೆ ಬಿಟ್ಟರು.

ಕರಾವಳಿಯ ಸುತ್ತಮುತ್ತ ಅರಣ್ಯ ಭಾಗದಲ್ಲಿ ನೀರಿನ ಕೊರತೆ ಹೆಚ್ಚಾಗಿವೆ ಹೀಗಾಗಿ ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ನೀರನ್ನ ಅರಸಿ ನಾಡಿಗೆ ಕಾಳಿಂಗ ಸರ್ಪ ಗಳು ಸೇರಿದಂತೆ ವಿವಿಧ ಉರಗಗಳು ಬರುತ್ತಿರುವುದು ಸಾಮಾನ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *