ಕದನ ವಿರಾಮ ಘೋಷಣೆಗೆ ಮುಂದಾಗುತ್ತಾರಾ ಡಿಕೆ ಬದ್ರರ್ಸ್‌?

Public TV
2 Min Read

ಬೆಂಗಳೂರು: ಮುಂದಿನ ಸಿಎಂ ಹೇಳಿಕೆ ಹಾಗೂ ಜಮೀರ್ ಎಪಿಸೋಡ್ ಬಗ್ಗೆ ಡಿಕೆ ಬ್ರದರ್ಸ್ ಕದನ ವಿರಾಮ ಘೋಷಣೆ ಮಾಡುತ್ತಾರೆ ಎಂಬ ಮಾತು ಕಾಂಗ್ರೆಸ್ ಪಾಳಯದಲ್ಲಿ ಕೇಳಿಬರುತ್ತಿದೆ.

2-3 ತಿಂಗಳು ಕಾದು ನೋಡುವ ಅಸ್ತ್ರ ಪ್ರಯೋಗದ ಮೂಲಕ ಲಾಭ ನಷ್ಟದ ಲೆಕ್ಕಾಚಾರ ಹಾಕಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಜಮೀರ್‌ ಅವರಂತ ನಾಯಕರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ಕೊಡದೇ ಮೌನವಾಗಿರಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಇಂತಹ ಹೇಳಿಕೆಗಳಿಂದ ಅಂತರ ಕಾಯ್ದುಕೊಳ್ಳುವುದು, ತೀರಾ ಅತಿಯಾಗಿ ಬೇರೆಯವರು ಮಾತನಾಡಿದರೆ ಪಕ್ಷದ ವ್ಯಾಪ್ತಿಯಲ್ಲಿ ಶಿಸ್ತು ಕ್ರಮದ ಅಸ್ತ್ರ ಪ್ರಯೋಗ ಇದರ ಹಿಂದಿನ ಲೆಕ್ಕಾಚಾರ ಎನ್ನಲಾಗುತ್ತಿದೆ. ಅಲ್ಲದೆ ಈ ಬೆಳವಣಿಗೆ ಆದರೆ ಸಿದ್ದರಾಮಯ್ಯ ಟೀಂ ಸಹ ಮಾತು ಕಡಿಮೆ ಮಾಡಬಹುದು ಎನ್ನುವುದು ಡಿಕೆ ಬ್ರದರ್ಸ್ ಲೆಕ್ಕಾಚಾರ ಎನ್ನಲಾಗುತ್ತಿದೆ. ತಮ್ಮ ಅತ್ಯಾಪ್ತ ಜಮೀರ್‌ಗೆ ಸಿದ್ದರಾಮಯ್ಯ ಕರೆದು ಬುದ್ದಿವಾದ ಹೇಳುತ್ತಾರಾ ಎಂಬ ನಿರೀಕ್ಷೆಯಲ್ಲಿ ಪಕ್ಷದ ನಾಯಕರಿದ್ದಾರೆ.

ಮತ್ತೆ ಗುಡುಗು:
ಬಾಯಿಮುಚ್ಚಿಕೊಂಡು ಕೆಲಸ ಮಾಡ್ತಬೇಕು. ವ್ಯಕ್ತಿ ಪೂಜೆ ಬಿಡ್ಬೇಕು ಎಂದು ಜಮೀರ್‌ಗೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ ಎಚ್ಚರಿಕೆ ಕೊಟ್ಟಿದ್ದರು. ಆದರೆ, ರಾತ್ರಿ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಜಮೀರ್, ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸತ್ತ ಬಳಿಕವೇ ನನ್ನ ಬಾಯಿ ಮುಚ್ಚುವುದು ಎಂದಿದ್ದಾರೆ. ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತೆ: ರಾಜನಾಥ್ ಸಿಂಗ್

ಹುಬ್ಬಳ್ಳಿಯಲ್ಲಿ ಸಿದ್ದರಾಮೋತ್ಸವ ಪೂರ್ವಭಾವಿ ಸಭೆ ನಡೆಸಿದ ಜಮೀರ್, ರಾಜಕೀಯದಲ್ಲಿ ಲೆವೆಲ್ ಗುರುತಿಸೋದು ಜನ. ನಮ್ಮ ಲೆವೆಲ್ ಜನ ಹೇಳಬೇಕು ಅಂತ ಟಾಂಗ್ ಕೊಟ್ಟಿದ್ದಾರೆ. ಜೊತೆಗೆ, ಡಿಕೆಶಿ ನಮ್ಮ ಅಧ್ಯಕ್ಷರು, ನಮ್ಮ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ ಅಂತಲೂ ಹೇಳಿದ್ದಾರೆ. ಇದೇ ವೇಳೆ, ನಾನು ಒಕ್ಕಲಿಗರ ಬಗ್ಗೆ ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ನನಗೂ ನಮ್ಮ ಜಾತಿಯವರಿಗಿಂತ ಒಕ್ಕಲಿಗರು ಬಹಳ ಆತ್ಮೀಯರಿದ್ದಾರೆ. ಸ್ವಾಮೀಜಿಯವರ ಅಸಮಾಧಾನದ ಬಗ್ಗೆ ನಂಗೆ ಗೊತ್ತಿಲ್ಲ. ಚಲುರಾಯಸ್ವಾಮಿ ನಂಗೆ ಏನನ್ನು ಹೇಳಿಲ್ಲ. ಎಐಸಿಸಿಯಿಂದಲೂ ನನಗೆ ಸೂಚನೆ ಬಂದಿಲ್ಲ ಎಂದಿದ್ದಾರೆ.

ತಪ್ಪೇನಿದೆ? : ನಾನು ಪಕ್ಷ ಪೂಜೆ ಮಾಡುತ್ತೇನೆ. ವ್ಯಕ್ತಿ ಪೂಜೆಯನ್ನೂ ಮಾಡುತ್ತೇನೆ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ? ರಾಜ್ಯದ ಹಿಂದು ನಾಯಕರಲ್ಲಿ ಮುಸ್ಲಿಮ್‌ ಸಮುದಾಯ ಏಳಿಗೆ ಬಗ್ಗೆ ಚಿಂತನೆ ಮಾಡಿದ ಏಕೈಕ ಸಿಎಂ ಎಂದರೆ ಅದು ಸಿದ್ದರಾಮಯ್ಯ ಮಾತ್ರ. ಅಲ್ಪಸಂಖ್ಯಾತರ ಅನುದಾನ ಹೆಚ್ಚಿಗೆ ಮಾಡಿದ ಏಕೈಕ ಸಿಎಂ ಅಂದ್ರೆ ಅದು ಸಿದ್ದರಾಮಯ್ಯ. ಹೀಗಾಗಿ ಹಿಂದೂ ನಾಯಕರಲ್ಲಿ ಮುಸ್ಲಿಮರ ಹಿತಚಿಂತಕ ನಾಯಕವೆಂದರೆ ಸಿದ್ದರಾಮಯ್ಯ, ಅದನ್ನು ನೀವು ಜೋರಾಗಿ ಹೇಳಬೇಕು. ಎಲ್ಲರಿಗೂ ಕೇಳುವಂತೆ ಕುಟ್ಟಿ ಕುಟ್ಟಿ ಹೇಳಿಬೇಕು. ಕೆಲವರಿಗೆ ಕೇಳೋದಿಲ್ಲ. ಹೀಗಾಗಿ ಕೇಳೋ ರೀತಿ ಹೇಳಬೇಕು ಎಂದು ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *