ರಾಜ್ಯದ ಹವಾಮಾನ ವರದಿ: 30-05-2023

Public TV
1 Min Read

ಸೋಮವಾರ ರಾಜ್ಯದ ಹಲವೆಡೆ ವರುಣನ ಆಗಮನವಾಗಿದೆ. ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದಿದ್ದು, ಮಳೆ ಹಾಗೂ ಗಾಳಿಯ ರಭಸಕ್ಕೆ ಹಲವಾರು ಮರಗಳು ಧರೆಗುರುಳಿವೆ. ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.

ಮುಂಗಾರಿಗೂ ಮುನ್ನವೇ ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಾಮರಾಜನಗರ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳಲ್ಲಿ ಜೂನ್ 2ರವರೆಗೂ ಅಧಿಕ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿ ಮತ್ತು ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

weather

ನಗರಗಳ ಹವಾಮಾನ ವರದಿ:
ಬೆಂಗಳೂರು: 32-21
ಮಂಗಳೂರು: 33-26
ಶಿವಮೊಗ್ಗ: 36-23
ಬೆಳಗಾವಿ: 36-23
ಮೈಸೂರು: 34-22

ಮಂಡ್ಯ: 34-23
ಮಡಿಕೇರಿ: 28-19
ರಾಮನಗರ: 34-23
ಹಾಸನ: 32-21
ಚಾಮರಾಜನಗರ: 34-22
ಚಿಕ್ಕಬಳ್ಳಾಪುರ: 33-22

ಕೋಲಾರ: 33-23
ತುಮಕೂರು: 33-22
ಉಡುಪಿ: 34-26
ಕಾರವಾರ: 34-28
ಚಿಕ್ಕಮಗಳೂರು: 31-20
ದಾವಣಗೆರೆ: 37-24

ಹುಬ್ಬಳ್ಳಿ: 37-24
ಚಿತ್ರದುರ್ಗ: 36-23
ಹಾವೇರಿ: 37 – 24
ಬಳ್ಳಾರಿ: 38-27
ಗದಗ: 37-24
ಕೊಪ್ಪಳ: 38-26

ರಾಯಚೂರು: 39-27
ಯಾದಗಿರಿ: 39-28
ವಿಜಯಪುರ: 38-27
ಬೀದರ್: 38-27
ಕಲಬುರಗಿ: 39-28
ಬಾಗಲಕೋಟೆ: 39-27

Share This Article