ರಾಜ್ಯದ ಹವಾಮಾನ ವರದಿ 30-03-2025

By
1 Min Read

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ಅಬ್ಬರ ಕಡಿಮೆಯಾಗಿದೆ. ಇಂದು ಸಹ ರಾಜ್ಯದ ಹಲವೆಡೆ ಮುಂಜಾನೆ ಹಾಗೂ ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ. ಮಧ್ಯಾಹ್ನದ ವೇಳೆಗೆ ಬಿಸಿಲಿನ ವಾತಾವರಣ ಇರಲಿದೆ. ಇನ್ನೂ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಲೆನಾಡು ಭಾಗವಾದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನದ ಕೆಲವೆಡೆ ಹಗುರ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಇಲಾಖೆ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 34-23
ಮಂಗಳೂರು: 31-26
ಶಿವಮೊಗ್ಗ: 36-23
ಬೆಳಗಾವಿ: 37-23
ಮೈಸೂರು: 37-23

ಮಂಡ್ಯ: 36-22
ಮಡಿಕೇರಿ: 33-19
ರಾಮನಗರ: 36-22
ಹಾಸನ: 34-21
ಚಾಮರಾಜನಗರ: 37-22
ಚಿಕ್ಕಬಳ್ಳಾಪುರ: 34-21

ಕೋಲಾರ: 34-21
ತುಮಕೂರು: 35-22
ಉಡುಪಿ: 32-26
ಕಾರವಾರ: 33-26
ಚಿಕ್ಕಮಗಳೂರು: 32-21
ದಾವಣಗೆರೆ: 37-24

ಹುಬ್ಬಳ್ಳಿ: 38-23
ಚಿತ್ರದುರ್ಗ: 37-24
ಹಾವೇರಿ: 38-23
ಬಳ್ಳಾರಿ: 40-26
ಗದಗ: 37-24
ಕೊಪ್ಪಳ: 37-26

ರಾಯಚೂರು: 39-28
ಯಾದಗಿರಿ: 39-26
ವಿಜಯಪುರ: 38-26
ಬೀದರ್: 38-26
ಕಲಬುರಗಿ: 38-27
ಬಾಗಲಕೋಟೆ: 38-26

 

Share This Article