ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ಆ.30ರವರೆಗೆ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಆಗಸ್ಟ್ 30ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಒಳನಾಡು ಜಿಲ್ಲೆಗಳಲ್ಲಿ ಆ.28ರವರೆಗೆ ಗುಡುಗು, ಗಾಳಿ ಸಹಿತ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ
ಬೆಂಗಳೂರು: 24-21
ಮಂಗಳೂರು: 26-24
ಶಿವಮೊಗ್ಗ: 23-21
ಬೆಳಗಾವಿ: 24-21
ಮೈಸೂರು: 27-22
ಮಂಡ್ಯ: 27-22
ಮಡಿಕೇರಿ: 22-19
ರಾಮನಗರ: 26-21
ಹಾಸನ: 23-19
ಚಾಮರಾಜನಗರ: 29-22
ಚಿಕ್ಕಬಳ್ಳಾಪುರ: 24-21
ಕೋಲಾರ: 26-21
ತುಮಕೂರು: 24-21
ಉಡುಪಿ: 25-24
ಕಾರವಾರ: 27-24
ಚಿಕ್ಕಮಗಳೂರು: 21-19
ದಾವಣಗೆರೆ: 25-22
ಹುಬ್ಬಳ್ಳಿ: 25-21
ಚಿತ್ರದುರ್ಗ: 24-21
ಹಾವೇರಿ: 24-22
ಬಳ್ಳಾರಿ: 29-23
ಗದಗ: 26-22
ಕೊಪ್ಪಳ: 27-23
ರಾಯಚೂರು: 28-23
ಯಾದಗಿರಿ: 27-23
ವಿಜಯಪುರ: 27-22
ಬೀದರ್: 24-22
ಕಲಬುರಗಿ: 26-22
ಬಾಗಲಕೋಟೆ: 27-22