ಶನಿವಾರ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿದೆ. ರಣ ಬಿಸಿಲಿನಿಂದ ಕಂಗೆಟ್ಟಿದ್ದ ಜಿಲ್ಲೆಗಳಿಗೆ ವರುಣ ತಂಪೆರೆದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ರಾಯಚೂರು, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದ್ದು, ರೈತರು ಬೆಳೆದ ಬೆಳೆಗೆ ಜೀವಕಳೆ ತುಂಬಿದೆ.
ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಅಲ್ಲದೇ ಬೆಳಗಾವಿ, ಮಡಿಕೇರಿ, ಹಾಸನ ಮತ್ತು ಕಾರವಾರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 24 ಡಿಗ್ರಿ, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 29-20
ಮಂಗಳೂರು: 30-24
ಶಿವಮೊಗ್ಗ: 30-21
ಬೆಳಗಾವಿ: 28-21
ಮೈಸೂರು: 32-21
ಮಂಡ್ಯ: 32-21
ಮಡಿಕೇರಿ: 24-17
ರಾಮನಗರ: 32-21
ಹಾಸನ: 28-19
ಚಾಮರಾಜನಗರ: 32-21
ಚಿಕ್ಕಬಳ್ಳಾಪುರ: 30-20
ಕೋಲಾರ: 31-21
ತುಮಕೂರು: 30-20
ಉಡುಪಿ: 30-24
ಕಾರವಾರ: 30-25
ಚಿಕ್ಕಮಗಳೂರು: 27-18
ದಾವಣಗೆರೆ: 31-22
ಹುಬ್ಬಳ್ಳಿ: 30-22
ಚಿತ್ರದುರ್ಗ: 31-20
ಹಾವೇರಿ: 31-22
ಬಳ್ಳಾರಿ: 34-23
ಗದಗ: 32-22
ಕೊಪ್ಪಳ: 33-22
ರಾಯಚೂರು: 34-24
ಯಾದಗಿರಿ: 34-24
ವಿಜಯಪುರ: 33-23
ಬೀದರ್: 30-22
ಕಲಬುರಗಿ: 34-23
ಬಾಗಲಕೋಟೆ: 33-23
Web Stories