ರಾಜ್ಯದ ಹವಾಮಾನ ವರದಿ 22-02-2025

By
1 Min Read

ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ಅಬ್ಬರ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಈ ಬಾರಿ ಈಗಾಗಲೇ 34.4 ಡಿಗ್ರಿಗೆ ಉಷ್ಣಾಂಶ ತಲುಪಿದೆ. ಈ ಮೂಲಕ 20 ವರ್ಷದ ಗರಿಷ್ಠ ತಾಪಮಾನದ ಸನಿಹಕ್ಕೆ ನಗರದ ತಾಪಮಾನ ತಲುಪಿದೆ. ಇಂದು ಸಹ ಬಿಸಿಲಿನ ಅಬ್ಬರ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಕರಾವಳಿ ಜಿಲ್ಲೆಗಳಾದ ಉಡುಪಿ, ಕಾರವಾರ, ದಕ್ಷಿಣ ಕನ್ನಡ ಸೇರಿದಂತೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಇಲಾಖೆ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 32-20
ಮಂಗಳೂರು: 31-25
ಶಿವಮೊಗ್ಗ: 34-20
ಬೆಳಗಾವಿ: 34-21
ಮೈಸೂರು: 34-20

ಮಂಡ್ಯ: 34-20
ಮಡಿಕೇರಿ: 33-18
ರಾಮನಗರ: 33-20
ಹಾಸನ: 32-18
ಚಾಮರಾಜನಗರ: 34-20
ಚಿಕ್ಕಬಳ್ಳಾಪುರ: 31-18

ಕೋಲಾರ: 31-18
ತುಮಕೂರು: 32-19
ಉಡುಪಿ: 31-25
ಕಾರವಾರ: 33-24
ಚಿಕ್ಕಮಗಳೂರು: 31-18
ದಾವಣಗೆರೆ: 35-21

ಹುಬ್ಬಳ್ಳಿ: 35-21
ಚಿತ್ರದುರ್ಗ: 33-21
ಹಾವೇರಿ: 36-20
ಬಳ್ಳಾರಿ: 36-22
ಗದಗ: 34-20
ಕೊಪ್ಪಳ: 35-21

ರಾಯಚೂರು: 36-23
ಯಾದಗಿರಿ: 35-22
ವಿಜಯಪುರ: 35-21
ಬೀದರ್: 34-19
ಕಲಬುರಗಿ: 36-22
ಬಾಗಲಕೋಟೆ: 35-22

Share This Article