ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವು ಕಡೆ ಸಂಪೂರ್ಣ ಮೋಡ ಕವಿದ ವಾತಾವರಣವಿದೆ. ದಿನವಿಡೀ ಕೂಲ್ ಕೂಲ್ ವಾತಾವರಣ ಮುಂದುವರಿದಿದೆ. ಕರಾವಳಿಯ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಹ ಆಗಿದೆ. ಇದಕ್ಕೆ ಕಾರಣ ತಮಿಳುನಾಡು, ಕೇರಳ ಸಮುದ್ರ ಭಾಗದಲ್ಲಿನ ಮೇಲ್ಮೈ ಸುಳಿಗಾಳಿ ಎಫೆಕ್ಟ್.
ಕೇರಳ ಹಾಗೂ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಎರಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇದರ ಎಫೆಕ್ಟ್ ಕರ್ನಾಟಕದ ಕೆಲವೆಡೆಯೂ ಇದ್ದು, ಪರಿಣಾಮ ಬೆಂಗಳೂರು ಕೂಲ್ ಸಿಟಿಯಾಗಿದೆ. ಈ ವಾತಾವರಣ ಇನ್ನೆರಡು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಾರವಾರ ಹಾಗೂ ಮಂಗಳೂರಿನಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 26-17
ಮಂಗಳೂರು: 33-24
ಶಿವಮೊಗ್ಗ: 29-19
ಬೆಳಗಾವಿ: 26-18
ಮೈಸೂರು: 27-18
ಮಂಡ್ಯ: 27-18
ಮಡಿಕೇರಿ: 26-17
ರಾಮನಗರ: 27-18
ಹಾಸನ: 27-17
ಚಾಮರಾಜನಗರ: 27-18
ಚಿಕ್ಕಬಳ್ಳಾಪುರ: 25-16
ಕೋಲಾರ: 25-17
ತುಮಕೂರು: 26-17
ಉಡುಪಿ: 32-24
ಕಾರವಾರ: 33-25
ಚಿಕ್ಕಮಗಳೂರು: 23-16
ದಾವಣಗೆರೆ: 28-19
ಹುಬ್ಬಳ್ಳಿ: 28-18
ಚಿತ್ರದುರ್ಗ: 25-18
ಹಾವೇರಿ: 28-19
ಬಳ್ಳಾರಿ: 29-19
ಗದಗ: 27-19
ಕೊಪ್ಪಳ: 28-19
ರಾಯಚೂರು: 29-19
ಯಾದಗಿರಿ: 29-18
ವಿಜಯಪುರ: 28-18
ಬೀದರ್: 26-15
ಕಲಬುರಗಿ: 28-18
ಬಾಗಲಕೋಟೆ: 28-19