ರಾಜ್ಯದ ಹವಾಮಾನ ವರದಿ 19-03-2025

Public TV
1 Min Read

ಳೆದ ನಾಲ್ಕೈದು ದಿನಗಳಿಂದ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ಕಡಿಮೆಯಾಗಿದೆ. ಇಂದು ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ. ಅಲ್ಲದೇ ಕೆಲ ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆಯೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡ, ದಕ್ಷಿಣ ಕರ್ನಾಟಕದ ಜಿಲ್ಲೆಗಳಾದ ಹಾಸನ, ಕೊಡಗು, ಮೈಸೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ. ಇಂದಿನಿಂದ ಮಾ.20 ರವರೆಗೆ ಬಾಗಲಕೋಟೆ, ಬೀದರ್, ಕಲಬುರ್ಗಿ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಭಾರೀ ಏರಿಕೆಯಾಗುವ ಮುನ್ಸೂಚನೆ ಇದ್ದು ಬಿಸಿಗಾಳಿ ಬೀಸುವ ಸಾಧ್ಯತೆ ಇದೆ ಎಂದು ಇಲಾಖೆ ವರದಿ ಮಾಡಿದೆ

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 34-21
ಮಂಗಳೂರು: 32-26
ಶಿವಮೊಗ್ಗ: 37-22
ಬೆಳಗಾವಿ: 36-22
ಮೈಸೂರು: 36-22

ಮಂಡ್ಯ: 36-22
ಮಡಿಕೇರಿ: 35-21
ರಾಮನಗರ: 35-21
ಹಾಸನ: 34-21
ಚಾಮರಾಜನಗರ: 35-22
ಚಿಕ್ಕಬಳ್ಳಾಪುರ: 33-19

ಕೋಲಾರ: 32-19
ತುಮಕೂರು: 34-20
ಉಡುಪಿ: 31-26
ಕಾರವಾರ: 33-26
ಚಿಕ್ಕಮಗಳೂರು: 33-18
ದಾವಣಗೆರೆ: 37-22

ಹುಬ್ಬಳ್ಳಿ: 38-21
ಚಿತ್ರದುರ್ಗ: 36-22
ಹಾವೇರಿ: 38-22
ಬಳ್ಳಾರಿ: 38-23
ಗದಗ: 36-21
ಕೊಪ್ಪಳ: 37-21

ರಾಯಚೂರು: 39-24
ಯಾದಗಿರಿ: 38-23
ವಿಜಯಪುರ: 38-24
ಬೀದರ್: 37-24
ಕಲಬುರಗಿ: 38-24
ಬಾಗಲಕೋಟೆ: 38-23

Share This Article