ರಾಜ್ಯದ ಹವಾಮಾನ ವರದಿ: 16-12-2025

1 Min Read

ರಾಜ್ಯದಲ್ಲಿ ಚಳಿ ಹೆಚ್ಚಾದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ 9 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಯಾದಗಿರಿ, ಧಾರವಾಡ, ಕೊಪ್ಪಳ ಜಿಲ್ಲೆಗಳಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಶೀತಗಾಳಿ ಬೀಸಲಿದೆ. ಜನರು ಆದಷ್ಟು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಈ 9 ಜಿಲ್ಲೆಗಳಲ್ಲಿ ತಾಪಮಾನ ದಿಢೀರ್ ಕುಸಿತ ಕಂಡಿದೆ. ಇನ್ನೂ ತಾಪಮಾನ ಕುಸಿಯುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 26-15
ಮಂಗಳೂರು: 31-23
ಶಿವಮೊಗ್ಗ: 29-17
ಬೆಳಗಾವಿ: 28-16
ಮೈಸೂರು: 28-16

ಮಂಡ್ಯ: 29-16
ಮಡಿಕೇರಿ: 27-13
ರಾಮನಗರ: 29-16
ಹಾಸನ: 27-1z
ಚಾಮರಾಜನಗರ: 28-16
ಚಿಕ್ಕಬಳ್ಳಾಪುರ: 26-14

ಕೋಲಾರ: 26-15
ತುಮಕೂರು: 27-15
ಉಡುಪಿ: 32-22
ಕಾರವಾರ: 31-24
ಚಿಕ್ಕಮಗಳೂರು: 25-14
ದಾವಣಗೆರೆ: 30-17

ಹುಬ್ಬಳ್ಳಿ: 29-16
ಚಿತ್ರದುರ್ಗ: 28-16
ಹಾವೇರಿ: 30-17
ಬಳ್ಳಾರಿ: 28-16
ಗದಗ: 28-16
ಕೊಪ್ಪಳ: 28-16

ರಾಯಚೂರು: 29-16
ಯಾದಗಿರಿ: 29-15
ವಿಜಯಪುರ: 28-15
ಬೀದರ್: 27-14
ಕಲಬುರಗಿ: 29-15
ಬಾಗಲಕೋಟೆ: 28-15

Share This Article