ರಾಜ್ಯದ ಹವಾಮಾನ ವರದಿ: 16-03-2024

Public TV
1 Min Read

ರಾಜ್ಯದಲ್ಲಿ ಬಿಸಿಲಿನ ಝಳದ ಮಧ್ಯೆ ಹಲವು ಕಡೆ ವರುಣ ತಂಪೆರದಿದ್ದಾನೆ. ಮಾ.13 ರಂದು ಕೊಡಗು ಹಾಗೂ ಗುರುವಾರ ಚಿಕ್ಕಮಗಳೂರಿನಲ್ಲಿ ತುಂತುರು ಮಳೆಯಾಗಿತ್ತು. ರಾಜಧಾನಿ ಸೇರಿ ಹಲವೆಡೆ ಎಂದಿನಂತೆ ಬಿಸಿಲಿನ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಹಾವೇರಿ ಜಿಲ್ಲೆಗಳ ಜನರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಶುಕ್ರವಾರದಿಂದ 48 ಗಂಟೆಗಳ ಕಾಲ ಸೂರ್ಯನ ಬಿಸಿ ಹವೆಯಿಂದ (ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ) ಎಚ್ಚರಿಕೆ ವಹಿಸುವಂತೆ ಎಚ್ಚರಿಸಿದೆ.

weather

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 33-22
ಮಂಗಳೂರು: 31-24
ಶಿವಮೊಗ್ಗ: 36-21
ಬೆಳಗಾವಿ: 35-22
ಮೈಸೂರು: 37-22

Weather

ಮಂಡ್ಯ: 37-23
ಮಡಿಕೇರಿ: 33-19
ರಾಮನಗರ: 39-28
ಹಾಸನ: 34-20
ಚಾಮರಾಜನಗರ: 37-22
ಚಿಕ್ಕಬಳ್ಳಾಪುರ: 33-21

ಕೋಲಾರ: 33-21
ತುಮಕೂರು: 33-23
ಉಡುಪಿ: 31-24
ಕಾರವಾರ: 32-23
ಚಿಕ್ಕಮಗಳೂರು: 32-20
ದಾವಣಗೆರೆ: 37-23

ಹುಬ್ಬಳ್ಳಿ: 37-23
ಚಿತ್ರದುರ್ಗ: 36-23
ಹಾವೇರಿ: 37-23
ಬಳ್ಳಾರಿ: 38-26
ಗದಗ: 36-24
ಕೊಪ್ಪಳ: 37-26

ರಾಯಚೂರು: 39-27
ಯಾದಗಿರಿ: 38- 27
ವಿಜಯಪುರ: 37- 25
ಬೀದರ್: 37- 26
ಕಲಬುರಗಿ: 38-27
ಬಾಗಲಕೋಟೆ: 37-25

Share This Article