ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಎಚ್ಚರಿಸಿದೆ. ಹೆಚ್ಚುತ್ತಿರುವ ಬಿಸಿಲ ತಾಪದ ನಡುವೆ ಸಮುದ್ರದ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾದರೆ ಕರಾವಳಿ ಭಾಗಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಹೆಚ್ಚಿನ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಶಿವಮೊಗ್ಗ, ದಾವಣಗೆರೆ, ಹಾವೇರಿ, ಯಾದಗಿರಿ, ಬಾಗಲಕೋಟೆ, ರಾಯಚೂರು ಮತ್ತು ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಮಾನ ವರದಿ:
ಬೆಂಗಳೂರು: 30-18
ಮಂಗಳೂರು: 33-24
ಶಿವಮೊಗ್ಗ: 34-19
ಬೆಳಗಾವಿ: 33-19
ಮೈಸೂರು: 32-19
ಮಂಡ್ಯ: 33-19
ಮಡಿಕೇರಿ: 29-15
ರಾಮನಗರ: 32-19
ಹಾಸನ: 32-17
ಚಾಮರಾಜನಗರ: 31-19
ಚಿಕ್ಕಬಳ್ಳಾಪುರ: 28-17
ಕೋಲಾರ: 30-18
ತುಮಕೂರು: 31-18
ಉಡುಪಿ: 33-24
ಕಾರವಾರ: 32-25
ಚಿಕ್ಕಮಗಳೂರು: 31-16
ದಾವಣಗೆರೆ: 34-20
ಹುಬ್ಬಳ್ಳಿ: 33-19
ಚಿತ್ರದುರ್ಗ: 33-19
ಹಾವೇರಿ: 34-20
ಬಳ್ಳಾರಿ: 34-21
ಗದಗ: 33-20
ಕೊಪ್ಪಳ: 33-21
ರಾಯಚೂರು: 34-21
ಯಾದಗಿರಿ: 34-21
ವಿಜಯಪುರ: 33-21
ಬೀದರ್: 29-18
ಕಲಬುರಗಿ: 33-20
ಬಾಗಲಕೋಟೆ: 34-21