ರಾಜ್ಯದಾದ್ಯಂತ ಬಿಸಿಲಿನ ತಾಪ ಹೆಚ್ಚಾಗಿದೆ. ಇದರ ನಡುವೆ ಹಲವು ಜಿಲ್ಲೆಗಳಲ್ಲಿ ಮಳೆರಾಯ ತಂಪೆರೆದಿದ್ದಾನೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಇಂದಿನಿಂದ ಮೂರು ದಿನಗಳ ಕಾಲ ಕರಾವಳಿ ಭಾಗ ಹಾಗೂ ಬಳ್ಳಾರಿ, ಗದಗ, ಹಾವೇರಿ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 36-21
ಮಂಗಳೂರು: 34-27
ಶಿವಮೊಗ್ಗ: 39-23
ಬೆಳಗಾವಿ: 37-24
ಮೈಸೂರು: 37-22
ಮಂಡ್ಯ: 38-22
ಮಡಿಕೇರಿ: 33-18
ರಾಮನಗರ: 36-22
ಹಾಸನ: 36-21
ಚಾಮರಾಜನಗರ: 37-21
ಚಿಕ್ಕಬಳ್ಳಾಪುರ: 36-21
ಕೋಲಾರ: 36-22
ತುಮಕೂರು: 37-22
ಉಡುಪಿ: 34-22
ಕಾರವಾರ: 33-27
ಚಿಕ್ಕಮಗಳೂರು: 36-21
ದಾವಣಗೆರೆ: 39-23
ಹುಬ್ಬಳ್ಳಿ: 39-24
ಚಿತ್ರದುರ್ಗ: 38-23
ಹಾವೇರಿ: 39-24
ಬಳ್ಳಾರಿ: 41-26
ಗದಗ: 39-25
ಕೊಪ್ಪಳ: 39-26
ರಾಯಚೂರು: 41-27
ಯಾದಗಿರಿ: 41-28
ವಿಜಯಪುರ: 39-26
ಬೀದರ್: 38-25
ಕಲಬುರಗಿ: 41-27
ಬಾಗಲಕೋಟೆ: 40-27