ರಾಜ್ಯದಲ್ಲಿ ದಿನೇ ದಿನೇ ಚಳಿಯ ಪ್ರಮಾಣ ಹೆಚ್ಚಳವಾಗುತ್ತಿದೆ. ಇದರ ನಡುವೆ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಇಂದು ಸಹ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಪ್ರದೇಶಗಳಾದ ಕಾರವಾರ, ಉಡುಪಿ, ಮಂಗಳೂರು ಸೇರಿದಂತೆ ಮಲೆನಾಡಿನ ಭಾಗಗಳಾದ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕೊಂಚ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 27-18
ಮಂಗಳೂರು: 32-24
ಶಿವಮೊಗ್ಗ: 30-19
ಬೆಳಗಾವಿ: 29-18
ಮೈಸೂರು: 29-19
ಮಂಡ್ಯ: 29-19
ಮಡಿಕೇರಿ: 28-18
ರಾಮನಗರ: 29-18
ಹಾಸನ: 28-17
ಚಾಮರಾಜನಗರ: 29-19
ಚಿಕ್ಕಬಳ್ಳಾಪುರ: 27-16
ಕೋಲಾರ: 26-17
ತುಮಕೂರು: 28-17
ಉಡುಪಿ: 31-24
ಕಾರವಾರ: 32-24
ಚಿಕ್ಕಮಗಳೂರು: 27-16
ದಾವಣಗೆರೆ: 30-19
ಹುಬ್ಬಳ್ಳಿ: 30-19
ಚಿತ್ರದುರ್ಗ: 28-18
ಹಾವೇರಿ: 31-20
ಬಳ್ಳಾರಿ: 30-19
ಗದಗ: 29-19
ಕೊಪ್ಪಳ: 29-19
ರಾಯಚೂರು: 31-19
ಯಾದಗಿರಿ: 29-18
ವಿಜಯಪುರ: 30-19
ಬೀದರ್: 28-17
ಕಲಬುರಗಿ: 29-18
ಬಾಗಲಕೋಟೆ: 31-19