ರಾಜ್ಯಾದ್ಯಂತ ಬಿಸಿಲು ದಿನೇ ದಿನೇ ಹೆಚ್ಚಳವಾಗುತ್ತಿದೆ. ಕರಾವಳಿ ಭಾಗದಲ್ಲಿ ಬಿಸಿ ಗಾಳಿಯ ಎಚ್ಚರಿಕೆಯಿದೆ. ಅಧಿಕ ಉಷ್ಣಾಂಶ ವರದಿಯಾಗುತ್ತಿದ್ದು, ಏಪ್ರಿಲ್ನಲ್ಲಿ ಬಿಸಿಲಿನ ಬೇಗೆ ಇನ್ನಷ್ಟು ಅಧಿಕವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಾರ್ಚ್ 14 ಹಾಗೂ 15 ರಂದು ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಗಲು ವೇಳೆ ಮಳೆಯಾಗುವ ಸಾಧ್ಯತೆಯಿದೆ. ಏಪ್ರಿಲ್ನಲ್ಲಿ ಬಿಸಿಗಾಳಿ ಹೆಚ್ಚಾಗಲಿದೆ. ಮುಂದಿನ ತಿಂಗಳು ಬೆಂಗಳೂರಿನಲ್ಲಿ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆಯಿದೆ. ಜನರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಶಿವಮೊಗ್ಗದಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 32-17
ಮಂಗಳೂರು: 33-25
ಶಿವಮೊಗ್ಗ: 37-19
ಬೆಳಗಾವಿ: 36-19
ಮೈಸೂರು: 34-18
ಮಂಡ್ಯ: 34-18
ಮಡಿಕೇರಿ: 32-16
ರಾಮನಗರ: 34-18
ಹಾಸನ: 33-18
ಚಾಮರಾಜನಗರ: 34-18
ಚಿಕ್ಕಬಳ್ಳಾಪುರ: 31-16
ಕೋಲಾರ: 32-17
ತುಮಕೂರು: 33-18
ಉಡುಪಿ: 34-25
ಕಾರವಾರ: 33-25
ಚಿಕ್ಕಮಗಳೂರು: 33-17
ದಾವಣಗೆರೆ: 36-21
ಹುಬ್ಬಳ್ಳಿ: 36-20
ಚಿತ್ರದುರ್ಗ: 34-21
ಹಾವೇರಿ: 37-20
ಬಳ್ಳಾರಿ: 36-21
ಗದಗ: 36-21
ಕೊಪ್ಪಳ: 36-21
ರಾಯಚೂರು: 36-20
ಯಾದಗಿರಿ: 36-21
ವಿಜಯಪುರ: 36-22
ಬೀದರ್: 34-21
ಕಲಬುರಗಿ: 36-21
ಬಾಗಲಕೋಟೆ: 36-21