ರಾಜ್ಯದ ಹವಾಮಾನ ವರದಿ: 11-06-2023

Public TV
1 Min Read

ರಬ್ಬೀ ಸಮುದ್ರದಲ್ಲಿ ಬಿಪೊರ್‌ಜೊಯ್ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನೆರಡು ದಿನಗಳ ಕಾಲ ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಗಾಳಿಯ ವೇಗವು ಘಂಟೆಗೆ 45-55 ಕಿಮೀ ತಲುಪಬಹುದಾಗಿದ್ದು, ಈ ಹಿನ್ನಲೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ಮಳೆ ಮುನ್ಸೂಚನೆ ನೀಡಲಾಗಿದೆ. ಇಂದು ಮತ್ತು ನಾಳೆ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಅಲ್ಲದೇ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 30-21
ಮಂಗಳೂರು: 31-26
ಶಿವಮೊಗ್ಗ: 32-23
ಬೆಳಗಾವಿ: 29-22
ಮೈಸೂರು: 31-22

ಮಂಡ್ಯ: 32-22
ಮಡಿಕೇರಿ: 24-18
ರಾಮನಗರ: 33-22
ಹಾಸನ: 28-21
ಚಾಮರಾಜನಗರ: 32-22
ಚಿಕ್ಕಬಳ್ಳಾಪುರ: 32-21

ಕೋಲಾರ: 33-22
ತುಮಕೂರು: 32-22
ಉಡುಪಿ: 31-26
ಕಾರವಾರ: 31-27
ಚಿಕ್ಕಮಗಳೂರು: 27-20
ದಾವಣಗೆರೆ: 34-23

ಹುಬ್ಬಳ್ಳಿ: 32-23
ಚಿತ್ರದುರ್ಗ: 33-22
ಹಾವೇರಿ: 33-23
ಬಳ್ಳಾರಿ: 37-25
ಗದಗ: 33-23
ಕೊಪ್ಪಳ: 35-24

ರಾಯಚೂರು: 37-26
ಯಾದಗಿರಿ: 38-26
ವಿಜಯಪುರ: 35-24
ಬೀದರ್: 36-25
ಕಲಬುರಗಿ: 37-26
ಬಾಗಲಕೋಟೆ: 36-24

Share This Article