ರಾಜ್ಯದ ಹವಾಮಾನ ವರದಿ: 09-01-2024

By
1 Min Read

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದ ಹಲವು ಭಾಗಗಳಲ್ಲಿ ಎರಡು ದಿನಗಳಿಂದ ಹಗುರ ಮಳೆಯಾಗುತ್ತಿದೆ. ಇಂದು ಸಹ ಕೆಲವೆಡೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ಸೇರಿದಂತೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರದ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗಲಿದೆ. ದಕ್ಷಿಣ ಒಳನಾಡು ಭಾಗದಲ್ಲಿ ಮೋಡ ಕವಿದ ವಾತಾವರಣ ಹಾಗೂ ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 25-19
ಮಂಗಳೂರು: 30-24
ಶಿವಮೊಗ್ಗ: 28-19
ಬೆಳಗಾವಿ: 27-19
ಮೈಸೂರು: 28-19

ಮಂಡ್ಯ: 28-21
ಮಡಿಕೇರಿ: 27-18
ರಾಮನಗರ: 27-21
ಹಾಸನ: 26-19
ಚಾಮರಾಜನಗರ: 28-21
ಚಿಕ್ಕಬಳ್ಳಾಪುರ: 24-18

ಕೋಲಾರ: 24-18
ತುಮಕೂರು: 26-19
ಉಡುಪಿ: 31-24
ಕಾರವಾರ: 31-23
ಚಿಕ್ಕಮಗಳೂರು: 24-18
ದಾವಣಗೆರೆ: 29-21

ಹುಬ್ಬಳ್ಳಿ: 28-19
ಚಿತ್ರದುರ್ಗ: 27-20
ಹಾವೇರಿ: 29-20
ಬಳ್ಳಾರಿ: 29-22
ಗದಗ: 28-19
ಕೊಪ್ಪಳ: 29-21

ರಾಯಚೂರು: 29-22
ಯಾದಗಿರಿ: 29-21
ವಿಜಯಪುರ: 29-21
ಬೀದರ್: 28-18
ಕಲಬುರಗಿ: 29-20
ಬಾಗಲಕೋಟೆ: 29-22

Share This Article