ರಾಜ್ಯದ ಹವಾಮಾನ ವರದಿ 07-04-2025

Public TV
1 Min Read

ರಾಜ್ಯದಲ್ಲಿ ಏ.8ರವರೆಗೆ ಪೂರ್ವ ಮುಂಗಾರು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದ.ಕನ್ನಡ, ಉ.ಕನ್ನಡ, ಉಡುಪಿಯಲ್ಲಿ ಮಳೆಯಾಗುವ ಸಂಭವವಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ. ಕೆಲವೆಡೆ ಪ್ರತಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ರಾಜ್ಯ ಹವಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 33-22
ಮಂಗಳೂರು: 32-26
ಶಿವಮೊಗ್ಗ: 35-22
ಬೆಳಗಾವಿ: 36-23
ಮೈಸೂರು: 36-23

ಮಂಡ್ಯ: 35-23
ಮಡಿಕೇರಿ: 33-20
ರಾಮನಗರ: 35-23
ಹಾಸನ: 32-21
ಚಾಮರಾಜನಗರ: 35-22
ಚಿಕ್ಕಬಳ್ಳಾಪುರ: 33-20

ಕೋಲಾರ: 33-21
ತುಮಕೂರು: 33-22
ಉಡುಪಿ: 32-27
ಕಾರವಾರ: 34-27
ಚಿಕ್ಕಮಗಳೂರು: 31-21
ದಾವಣಗೆರೆ: 36-23

ಹುಬ್ಬಳ್ಳಿ: 37-24
ಚಿತ್ರದುರ್ಗ: 36-24
ಹಾವೇರಿ: 38-24
ಬಳ್ಳಾರಿ: 39-26
ಗದಗ: 37-26
ಕೊಪ್ಪಳ: 37-26

ರಾಯಚೂರು: 39-27
ಯಾದಗಿರಿ: 38-25
ವಿಜಯಪುರ: 38-25
ಬೀದರ್: 37-24
ಕಲಬುರಗಿ: 39-25
ಬಾಗಲಕೋಟೆ: 38-26

Share This Article