ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಅತ್ಯಧಿಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರೀ ಮಳೆ ಪ್ರಯುಕ್ತ ಈ ಆರು ಜಿಲ್ಲೆಗಳಿಗೆ ಇಂದು ಮತ್ತು ಮಂಗಳವಾರ (ಜುಲೈ 2) ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ: ಬೆಂಗಳೂರು: 28-21 ಮಂಗಳೂರು: 28-25 ಶಿವಮೊಗ್ಗ: 27-22 ಬೆಳಗಾವಿ: 26-22 ಮೈಸೂರು: 28-22
ಮಂಡ್ಯ: 29-22 ಮಡಿಕೇರಿ: 22-17 ರಾಮನಗರ: 29-22 ಹಾಸನ: 24-20 ಚಾಮರಾಜನಗರ: 29-22 ಚಿಕ್ಕಬಳ್ಳಾಪುರ: 29-21
ಕೋಲಾರ: 29-22 ತುಮಕೂರು: 29-22 ಉಡುಪಿ: 28-24 ಕಾರವಾರ: 27-24 ಚಿಕ್ಕಮಗಳೂರು: 24-19 ದಾವಣಗೆರೆ: 29-23
ಹುಬ್ಬಳ್ಳಿ: 28-22 ಚಿತ್ರದುರ್ಗ: 29-22 ಹಾವೇರಿ: 28-23 ಬಳ್ಳಾರಿ: 33-25 ಗದಗ: 29-23 ಕೊಪ್ಪಳ: 31-24
ರಾಯಚೂರು: 34-26 ಯಾದಗಿರಿ: 34-26 ವಿಜಯಪುರ: 32-23 ಬೀದರ್: 31-24 ಕಲಬುರಗಿ: 33-25 ಬಾಗಲಕೋಟೆ: 32-24