ರಾಜ್ಯದಲ್ಲಿಂದು 2 ಸಾವಿರ ಸಮೀಪದತ್ತ ಕೊರೊನಾ ಸೋಂಕಿನ ಪ್ರಕರಣ – ಮೂವರು ಬಲಿ

Public TV
1 Min Read

ಬೆಂಗಳೂರು: ಸತತ ಒಂದು ವಾರದಿಂದಲೂ 1,500ರ ಮಿತಿಯಲ್ಲಿದ್ದ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಇಂದು 2 ಸಾವಿರ ಸಮೀಪಿಸಿದೆ. ರಾಜ್ಯದಲ್ಲಿಂದು 1,889 ಪ್ರಕರಣಗಳು ದಾಖಲಾಗಿದ್ದು, ಮೂರು ಮರಣ ಪ್ರಕರಣ ದಾಖಲಾಗಿದೆ.

ಇಂದು ರಾಜ್ಯದಲ್ಲಿ 1,587 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,52,381 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 31,706 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,77,03,537 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಮಹಮ್ಮದ್ ಫಾಜಿಲ್ ಬರ್ಬರ ಹತ್ಯೆ- ಮಂಗಳೂರಿನ ಬಜ್ಬೆ, ಪಣಂಬೂರು, ಸುರತ್ಕಲ್, ಮುಲ್ಕಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಕೋವಿಡ್‌ನಿಂದ ಇಂದು ಮೂರು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,097 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ಶೇ.5.95 ಇದೆ. 9,135 ಸಕ್ರಿಯ ಪ್ರಕರಣಗಳಿವೆ. ಇಂದು 31,706 ಮಂದಿಯನ್ನು (26,110 ರ‍್ಯಾಪಿಡ್ ಆಂಟಿಜನ್, 5,596 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 70,567 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರವೀಣ್‌ ಹತ್ಯೆ ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಬ್ಬ ಯುವಕನ ಬರ್ಬರ ಹತ್ಯೆ

ಬೆಂಗಳೂರು ನಗರದಲ್ಲೇ 1,475 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 5, ಬಾಗಲಕೋಟೆಯಲ್ಲಿ 38, ಬಳ್ಳಾರಿಯಲ್ಲಿ 26, ಬೆಳಗಾವಿ 20, ಬೀದರ್‌ನಲ್ಲಿ 9, ಚಾಮರಾಜನಗರದಲ್ಲಿ 12, ಚಿಕ್ಕಬಳ್ಳಾಪುರದಲ್ಲಿ 13, ಚಿಕ್ಕಮಗಳೂರಿನಲ್ಲಿ 6, ಚಿತ್ರದುರ್ಗದಲ್ಲಿ 4, ದಕ್ಷಿಣ ಕನ್ನಡದಲ್ಲಿ 20, ದಾವಣಗೆರೆಯಲ್ಲಿ 6, ಧಾರವಾಡದಲ್ಲಿ 46, ಗದಗದಲ್ಲಿ 1, ಹಾಸನದಲ್ಲಿ 17 ಹಾವೇರಿಯಲ್ಲಿ 3, ಕಲಬುರಗಿಯಲ್ಲಿ 24, ಕೊಡಗಿನಲ್ಲಿ 21, ಕೋಲಾರದಲ್ಲಿ 23, ಕೊಪ್ಪಳದಲ್ಲಿ 9, ಮಂಡ್ಯದಲ್ಲಿ 19, ಮೈಸೂರಿನಲ್ಲಿ 39, ರಾಯಚೂರಿನಲ್ಲಿ 9, ರಾಮನಗರದಲ್ಲಿ 1, ಶಿವಮೊಗ್ಗದಲ್ಲಿ 11, ತುಮಕೂರಿನಲ್ಲಿ 12, ಉಡುಪಿಯಲ್ಲಿ 8, ಉತ್ತರ ಕನ್ನಡದಲ್ಲಿ 5, ವಿಜಯಪುರದಲ್ಲಿ 7 ಹಾಗೂ ಯಾದಗಿರಿಯಲ್ಲಿ ಶೂನ್ಯಪ್ರಕರಣ ವರದಿಯಾಗಿರುವುದಾಗಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *