ನುಡಿದಂತೆ ನಡೆಯಿರಿ – ದೋಸ್ತಿ ಸರ್ಕಾರಕ್ಕೆ ಬಿಜೆಪಿ ಗುದ್ದು

Public TV
2 Min Read

ಬೆಂಗಳೂರು: ದೋಸ್ತಿ ಸರ್ಕಾರದ ವಿಶ್ವಾತ ಮತಯಾಚನೆ ಕುರಿತ ಗೊಂದಲಗಳು ಕೊನೆ ಗಳಿಗೆವರೆಗೂ ಮುಂದುವರಿದಿದ್ದು, ಇಂದಿನ ಸದನದ ಹಂತಿಮ ಹಂತದಲ್ಲಿ ದೋಸ್ತಿ ಸರ್ಕಾರದ ನಾಯಕರು ಸದನವನ್ನು ನಾಳೆಗೆ ಮುಂದೂಡಲು ಸ್ಪೀಕರ್ ಅವರಿಗೆ ಮನವಿ ಮಾಡಿದ್ದಾರೆ.

ಇಂದು ಸಂಜೆ 6.20ಕ್ಕೆ 10 ನಿಮಿಷಗಳ ಕಾಲ ಸದನ ಮುಂದೂಡಿದ ಸ್ಪೀಕರ್ ರಮೇಶ್ ಕುಮಾರ್ ಅವರು ಕಚೇರಿಗೆ ತೆರಳಿದ್ದರು. ಆದರೆ ಸದನ ಮುಂದೂಡಿ ಒಂದೂವರೆ ಗಂಟೆಯಾದರೂ ಮತ್ತೆ ಸದನ ಆರಂಭಿಸಲಿಲ್ಲ. ಈ ನಡುವೆಯೇ ಸಿಎಂ ಸೇರಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪೀಕರ್ ಮನವೊಲಿಕೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಆದರೆ ಯಾರ ಮನವೊಲಿಕೆಗೂ ಕರಗದ ಸ್ಪೀಕರ್ ಕೊಟ್ಟ ಮಾತಿಗೆ ಬದ್ಧರಾಗಿ ಎಂಬ ಖಡಕ್ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.

ಇತ್ತ ದೋಸ್ತಿ ನಾಯಕರ ನಡೆಗೆ ಗುದ್ದು ನೀಡಿರುವ ಬಿಜೆಪಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ‘ನುಡಿದಂತೆ ನಡೆಯಿರಿ’ ಎಂದು ಟ್ವೀಟ್ ಮಾಡಿ ಅಭಿಯಾನವನ್ನು ಆರಂಭಿಸಿದೆ. ಆ ಮೂಲಕ ಸದನ ಹೊರಗೂ ಹೋರಾಟವನ್ನು ಆರಂಭಿಸಿದೆ. ಇತ್ತ ಬಿಜೆಪಿಗೆ ಟಾಂಗ್ ನೀಡಿರುವ ಕಾಂಗ್ರೆಸ್, ಆಪರೇಷನ್ ಕಮಲ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ನಿಮ್ಮ ಕುತಂತ್ರ ಬಯಲಾಗುತ್ತಿದೆ ಸ್ವಲ್ಪ ತಡೆಯಿರಿ ಎಂದು ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ. ಇದಕ್ಕೆ, ಒಂದು ವರ್ಷದಿಂದ ನಿಮ್ಮ ದುರಾಡಳಿತವನ್ನು ತಡೆದುಕೊಂಡು ಸಾಕಾಗಿದೆ ಈಗ ನಿಮ್ಮ ಡ್ರಾಮಾ ಸಾಕು ನಡಿಯಿರಿ ಎಂದು ಬಿಜೆಪಿ ತಿರುಗೇಟು ನೀಡಿದೆ.

ಸದ್ಯ ಸ್ಪೀಕರ್ ಅವರು ತಮ್ಮ ಮಾತಿಗೆ ಬದ್ಧರಾಗಿ ಇಂದೇ ವಿಶ್ವಾಸ ಮತಯಾಚನೆ ಸಿದ್ಧತೆ ನಡೆಸಲು ಸೂಚನೆ ನೀಡಿದ್ದಾರೆ. ಅಲ್ಲದೇ 8.30ರ ವೇಳೆಗೆ ಮತ್ತೆ ಸದನ ಆರಂಭ ಮಾಡಿದ್ದು, ಆದರೆ ಸದನವನ್ನು ನಾಳೆಗೆ ಮುಂದೂಡುವಂತೆ ದೋಸ್ತಿ ಸರ್ಕಾರ ನಾಯಕರು ಗದ್ದಲವನ್ನು ನಡೆಸಿದ್ದಾರೆ. ಆದರೆ ಇಂದು ರಾತ್ರಿ 1 ಗಂಟೆಯಾದರೂ ನಾವು ಸದನದಲ್ಲಿ ಇರುತ್ತೇವೆ ಇಂದೇ ವಿಶ್ವಾಸ ಮತಯಾಚನೆ ಆಗಬೇಕು ಎಂದು ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *