ರಾಮನಗರ: ಕನಕಪುರ ಬಂಡೆ ಬುಡಕ್ಕೆ ಡೈನಾಮೇಟ್ ಇಟ್ಟು, ಕುಮಾರಸ್ವಾಮಿಯನ್ನು ಲಾಕ್ ಮಾಡುವ ದಾಳವನ್ನು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೂಡಿದ್ರಾ ಎಂಬ ಪ್ರಶ್ನೆ ಎದ್ದಿದೆ.
ಹೌದು, ರಾಜ್ಯ ಕಾಂಗ್ರೆಸ್ (Congress) ನಲ್ಲಿ ಗೆಲುವಿನ ಮಂತ್ರಕ್ಕೆ ಹೊಸ ತಂತ್ರಗಾರಿಕೆಯ ಮುನ್ನುಡಿಯನ್ನು ಸಿದ್ದರಾಮಯ್ಯ ಬರೆದಿದ್ದಾರೆ. ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿಯಬೇಕಾದರೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ (JDS) ಮಣಿಸಿ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಬೇಕು. ಹಾಗಾಗ ಬೇಕಾದರೆ ಮಂಡ್ಯ, ರಾಮನಗರದಂತಹ ಒಕ್ಕಲಿಗರ ಕೋಟೆಯಲ್ಲಿ ಜೆಡಿಎಸ್ ಮಣಿಸಬೇಕು. ಇದಕ್ಕೆ ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ತಮ್ಮದೇ ಗೆಲುವಿನ ಫಾರ್ಮುಲಾ ಇಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಿದ್ದು-ಡಿಕೆಶಿಯನ್ನೇ ಬಿಟ್ಟು ಕಾಂಗ್ರೆಸ್ ಹೈಕಮಾಂಡ್ ಪಿಚ್ ರಿಪೋರ್ಟ್ ತಯಾರಿಸಿದ್ಯಾ?
ಅದರಲ್ಲಿ ಡಿಕೆಶಿ (DK Shivakumar) ತವರು ಜಿಲ್ಲೆ ರಾಮನಗರದ ವಿಚಾರದಲ್ಲಿ ಸಿದ್ದರಾಮಯ್ಯ ಹೈಕಮಾಂಡ್ ಮುಂದಿಟ್ಟ ಗೆಲುವಿನ ಫಾರ್ಮುಲ ವೆರಿ ವೆರಿ ಇಂಟರೆಸ್ಟಿಂಗ್. ಕಾಂಗ್ರೆಸ್ ಗೆಲುವು ಸುಲಭವಾಗಬೇಕಾದರೆ ರಾಮನಗರದಿಂದ ಸಂಸದ ಡಿ.ಕೆ ಸುರೇಶ್ ಅವರನ್ನ, ಚನ್ನಪಟ್ಟಣದಿಂದ ಮೋಹಕ ತಾರೆ ಮಾಜಿ ಸಂಸದೆ ರಮ್ಯಾ ಅವರನ್ನ ಅಖಾಡಕ್ಕೆ ಇಳಿಸಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎನ್ನೋದು ಸಿದ್ದರಾಮಯ್ಯ ವಾದ ಎನ್ನಲಾಗಿದೆ.
ರಮ್ಯ ಚನ್ನಪಟ್ಟಣ (Channapattana) ದಿಂದ ಸ್ಪರ್ಧೆ ಮಾಡಿದರೆ ಮಂಡ್ಯದ ಮೇಲೂ ಪ್ರಭಾವ ಬೀರಬಹುದು. ತ್ರಿಕೋನ ಸ್ಪರ್ಧೆಯಲ್ಲಿ ರಮ್ಯ ಗೆಲುವಿಗೆ ಅವಕಾಶ ಜಾಸ್ತಿ ಇರಲಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (H D Kumaraswamy) ಅವರನ್ನ ಚನ್ನಪಟ್ಟಣ ಹಾಗೂ ರಾಮನಗರದಲ್ಲೇ ಕಟ್ಟಿ ಹಾಕಬಹುದು. ಇದು ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಇಟ್ಟ ಗೆಲುವಿನ ಫಾರ್ಮುಲ ಎನ್ನಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k