ಬಿಜೆಪಿ 2 ನೇ ಪಟ್ಟಿ ರಿಲೀಸ್-‌ 23 ಅಭ್ಯರ್ಥಿಗಳ ಹೆಸರು ಬಿಡುಗಡೆ

Public TV
1 Min Read

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ಸಂಬಂಧ ಮಂಗಳವಾರವಷ್ಟೇ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಹೈಕಮಾಂಡ್‌  (BJP HighCommand) ಇಂದು (ಬುಧವಾರ) ಮತ್ತೆ 23 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಯಾರಿಗೆಲ್ಲ ಟಿಕೆಟ್..?: ದೇವರ ಹಿಪ್ಪರಗಿ- ಸೋಮನಗೌಡ ಪಾಟೀಲ್‌, ಬಸವನ ಬಾಗೇವಾಡಿ- ಎಸ್‌.ಕೆ ಬೆಳ್ಳುಬ್ಬಿ, ಇಂಡಿ- ಕಾಸಾಗೌಡ ಬಿರಾದಾರ್‌, ಗುರಮಿಠಕಲ್-‌ ಲಲಿತಾ ಅನಾಪುರ್‌, ಬೀದರ್-‌ ಈಶ್ವರ್‌ ಸಿಂಗ್‌ ಠಾಕೂರ್‌, ಭಾಲ್ಕಿ- ಪ್ರಕಾಶ್‌ ಖಂಡ್ರೆ, ಗಂಗಾವತಿ- ಪರಣ್ಣ ಮುನವಳ್ಳಿ, ಕಲಘಟಗಿ- ನಾಗರಾಜ್‌ ಛಬ್ಬಿ, ಹಾನಗಲ್-‌ ಶಿವರಾಜ್‌ ಸಜ್ಜನರ್‌, ಹಾವೇರಿ (ಎಸ್‌ಸಿ)- ಗವಿಸಿದ್ದಪ್ಪ ದ್ಯಾಮಣ್ಣವರ್‌, ಹರಪ್ಪನಹಳ್ಳಿ- ಕರುಣಾಕರ್‌ ರೆಡ್ಡಿ, ದಾವಣಗೆರೆ ಉತ್ತರ- ಲೋಕಿಕೆರೆ ನಾಗರಾಜ್‌, ದಾವಣಗೆರೆ ದಕ್ಷಿಣ- ಅಜಯ್‌ ಕುಮಾರ್‌, ಮಾಯಕೊಂಡ (ಎಸ್‌ಸಿ)- ಬಸವರಾಜ್‌ ನಾಯ್ಕ್‌, ಚನ್ನಗಿರಿ- ಶಿವಕುಮಾರ್‌, ಬೈಂದೂರು- ಗುರುರಾಜ್‌ ಗಂಟಿಹೊಳೆ, ಮೂಡಿಗೆರೆ (ಎಸ್‌ಸಿ)- ದೀಪಕ್‌ ದೊಡ್ಡಯ್ಯ, ಗುಬ್ಬಿ- ಎಸ್‌ಡಿ ದಿಲೀಪ್‌ ಕುಮಾರ್‌, ಶಿಡ್ಲಘಟ್ಟ- ರಾಮಚಂದ್ರ ಗೌಡ, ಕೋಲಾರ ಗೋಲ್ಡ್‌ ಫೀಲ್ಡ್‌ (ಎಸ್‌ಸಿ)- ಅಶ್ವಿನಿ ಸಂಪಂಗಿ, ಶ್ರವಣ ಬೆಳಗೊಳ- ಚಿದಾನಂದ, ಅರಸೀಕರೆ- ಜಿವಿ ಬಸವರಾಜ್‌ ಹಾಗೂ ಹೆಗಡಗಡ ದೇವನ ಕೋಟೆ (ಎಸ್‌ಟಿ)- ಕೃಷ್ಣ ನಾಯ್ಕ್‌. ಇದನ್ನೂ ಓದಿ: ಕೊನೆಗೂ ಬಿಜೆಪಿಯ ಮೊದಲ ಪಟ್ಟಿ ರಿಲೀಸ್ – 189 ಮಂದಿಗೆ ಟಿಕೆಟ್

ಯಾರಿಗೆ ಟಿಕೆಟ್‌ ಮಿಸ್?: ಹಾವೇರಿ ಶಾಸಕ ನೆಹರು ಓಲೇಕಾರ್‌, ಮಾಯಕೊಂಡ ಶಾಸಕ ಲಿಂಗಣ್ಣ, ಮೂಡಿಗೇರೆ ಶಾಸಕ ಕುಮಾರ್ ಸ್ವಾಮಿ, ಅರಸೀಕರೆ ಆಕಾಂಕ್ಷಿ ಎನ್ ಆರ್ ಸಂತೋಷ್‌, ಚನ್ನಗಿರಿ ಮಾಡಾಳ್, ಬೈಂದೂರು ಸುಕುಮಾರ್ ಶೆಟ್ಟಿ ಹೀಗೆ 2ನೇ ಪಟ್ಟಿಯಲ್ಲಿ ಐವರು ಹಾಲಿ ಶಾಸಕರಿಗೆ ಟಿಕೆಟ್‌ ಮಿಸ್‌ ಆಗಿದೆ. ಈ ಮೂಲಕ ಇಲ್ಲಿವರೆಗೆ ಒಟ್ಟು 13 ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗಿದೆ. ಬೆಂಗಳೂರಿನ ಗೋವಿಂದ ರಾಜನಗರ, ಹೆಬ್ಬಾಳ, ಮಹದೇವಪುರ‌ ಈ ಮೂರು ಕ್ಷೇತ್ರಗಳಿಗೆ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ. ಒಟ್ಟಿನಲ್ಲಿ ಇನ್ನೂ 12 ಕ್ಷೇತ್ರಗಳನ್ನು ಬಿಜೆಪಿ ಬಾಕಿ ಉಳಿಸಿಕೊಂಡಿದೆ.

 

Share This Article