ನಾವೆಲ್ಲ ಬಂದು ಬಿಜೆಪಿ ಸರ್ಕಾರ ತಂದ್ವಿ, ಆದ್ರೆ ಇವರೆಲ್ಲಾ ಎಡವಟ್ಟು ಗಿರಾಕಿಗಳು: ವಿಶ್ವನಾಥ್

Public TV
2 Min Read

ಹುಬ್ಬಳ್ಳಿ: ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಸೇರಿದಂತೆ ಅನೇಕ ರಾಜಕಾರಣಿಗಳು ತಾಕತ್, ಧಮ್ ಎಂಬ ಶಬ್ದಗಳನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ರಾಜಕಾರಣ ಹೊಲಸು ಹಿಡಿದಿದೆ. ಇದು ರಿಪೇರಿ ಆಗಲೇಬೇಕು ಎಂದು ಮಾಜಿ ಸಚಿವ ಹೆಚ್‌. ವಿಶ್ವನಾಥ್‌ (H Vishwanath) ಕಿಡಿಕಾರಿದರು.

ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ರಾಜಕಾರಣಿಗಳು ಕನ್ನಡ ಭಾಷೆಯನ್ನು ಕೊಲ್ಲುತ್ತಿದ್ದಾರೆ. ಜೊತೆಗೆ ನಾನು 50 ವರ್ಷಗಳಿಂದ ರಾಜಕಾರಣ ನೋಡುತ್ತಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಚುನಾವಣೆ ಎಂದರೆ ಎಷ್ಟು ಹಣ ಇಟ್ಟಿದ್ದೀಯಾ ಎಂದು ಕೇಳುತ್ತಾರೆ. ಇಂದು ಪಕ್ಷಕ್ಕಿಂತ ಪಕ್ಷದ ನಾಯಕರು ದೊಡ್ಡವರಾಗಿದ್ದಾರೆ. ಮೊದಲು ಪಕ್ಷ ದೊಡ್ಡದಿತ್ತು, ಆದರೆ ಇದೀಗ ನಾಯಕಾರಣ ರಾಜಕಾರಣ ಆಗಿದೆ. ಇದು ಮಾರಕ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್‌ ಕುರಿತು ರಮೇಶ್‌ ಜಾರಕಿಹೊಳಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಯಾರೂ ಯಾರನ್ನು ಮುಗಿಸಲು ಆಗುವುದಿಲ್ಲ. ನಾವೆಲ್ಲ ಒಟ್ಟಿಗೆ ಇದ್ದವರು. ಈ ಹೇಳಿಕೆಯನ್ನು ರಮೇಶ್‌ ಜಾರಕಿಹೊಳಿ ನೀಡಬಾರದ್ದಾಗಿತ್ತು. ಜನ ಏನಾದರೂ ಮಾಡಬಹುದು, ಆದರೆ ನಾವೇನು ಮಾಡಲು ಆಗುವುದಿಲ್ಲ. ಈ ರೀತಿ ಹೇಳಿಕೆಯನ್ನು ನೀಡುವುದರಿಂದ ಜಾರಕಿಹೊಳಿ ಕುಟುಂಬಕ್ಕೂ ಶೋಭೆ ತರುವುದಿಲ್ಲ ಎಂದ ಅವರು, ನಾವೆಲ್ಲ ಬಂದು ಬಿಜೆಪಿ (BJP) ಸರ್ಕಾರವನ್ನು ರಚಿಸಿದೆವು. ಆದರೆ ಇವರೆಲ್ಲ ಎಡವಟ್ಟು ಗಿರಾಕಿಗಳು. ಶಿಕ್ಷಣ ವ್ಯವಸ್ಥೆ ಹಾಳು ಮಾಡಿದ್ದಾರೆ. ಶಾಲೆಗೆ ಕಾವಿ ಬಣ್ಣ ಹೊಡೆಯುವುದು ಯೋಜನೆನಾ ಎಂದು ಪ್ರಶ್ನಿಸಿದರು.

ಈ ಬಾರಿ ಚುನಾವಣೆಯಲ್ಲಿ ಬಿ.ಎಸ್‌ ಯಡಿಯೂರಪ್ಪ (BS Yediyurappa) ನಮ್ಮ ಮ್ಯಾಜಿಕ್‌ 150 ಎನ್ನುತ್ತಾರೆ, ಸಿದ್ದರಾಮಯ್ಯ (Siddaramaiah), ಡಿ.ಕೆ ಶಿವಕುಮಾರ್‌ 115 ನಮ್ಮ ಮ್ಯಾಜಿಕ್‌ ಅನ್ನುತ್ತಾರೆ, ಅದೇ ರೀತಿ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) 123 ಅಂತಾರೆ. ಯಾರಪ್ಪ ನೀವು, ನೀವೇ ಡಬ್ಬ ತುಂಬಕೊಂಡ ಬಿಡುತ್ತೀರಾ. ಹುಚ್ಬರ ತರಹ ನೀವೇ ನಂಬರ್ ಕೊಡುತ್ತಿದ್ದೀರಾ. ಚುನಾವಣೆನೆ ಪ್ರಜಾಪ್ರಭುತ್ವದ ಆತ್ಮ. ಆದರೆ ಬಿಜೆಪಿ ಅಯೋಗ್ಯ ಸರ್ಕಾರ ಆತ್ಮವನ್ನೇ ಕಸಿಯುತ್ತಿದೆ. ಮತದಾರ ಹೆಸರನ್ನು ಡಿಲೀಟ್ ಮಾಡಿ ಅವರ ಆತ್ಮ ಕಸಿಯುತ್ತಿದೆ. ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಪುಡಿ ರೌಡಿ ತರಹ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನ್ನ ಸರ್ಕಾರ ಬಡವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ತಿದೆ: ಮುರ್ಮು

ಇದು ನಮೆಗಲ್ಲ ಆದರ್ಶನಾ, ರಾಜಕೀಯ ನಾಯಕರು ತಮ್ಮ ಮೌಲ್ಯ ಕಳೆದುಕೊಂಡಿದ್ದಾರೆ. ನನ್ನನ್ನು ಸೇರಿಸಿ ಎಲ್ಲರೂ ಮೌಲ್ಯ ಕಳೆದುಕೊಂಡಿದ್ದೇವೆ‌. ಮೌಲ್ಯ ಕಳೆದುಕೊಂಡ ಮೇಲೆ ಯಾರ ಮನೆ ಮುಂದೆ ನಿಲ್ಲುತ್ತೀರಿ ನೀವು. ಚುನಾವಣೆಗೆ ನಿಲ್ಲಲ್ಲ, ಟಿಕೆಟ್‌ಗೆ ಹತ್ತು ಕೋಟಿ ಕೊಡ್ತೀವಿ ಎನ್ನುತ್ತಿದ್ದಾರೆ. ನಾವೆಲ್ಲ ಚುನಾವಣೆಗೆ ನಿಲ್ಲಲು ಆಗಲ್ಲ. ಇವತ್ತು ಸೇವಾ ರಾಜಕಾರಣ ಹೋಯ್ತು, ಕಾಂಗ್ರೆಸ್ ನಮ್ಮ ತಾಯಿ. ನಾನು ಯಾವ ಪಾರ್ಟಿ ತೆಗಳೋಕೆ ಹೋಗಲ್ಲ. ಎಲ್ಲ ಪಕ್ಷಗಳು, RSS ಎಲ್ಲವೂ ಚೆನ್ನಾಗಿವೆ. ಆದರೆ ಅದನ್ನು ನಡೆಸುವವರು ಸರಿ‌ ಇಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಷಡ್ಯಂತ್ರಕ್ಕೆ ರಮೇಶ್ ಜಾರಕಿಹೊಳಿ ಬಲಿಯಾಗಿದ್ದಾರೆ: ರೇಣುಕಾಚಾರ್ಯ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *