ಕೋಲಾರದಲ್ಲಿ ಸ್ಪರ್ಧೆ- ಸಿದ್ದರಾಮಯ್ಯಗೆ ಸಿದ್ಧಗೊಂಡಿರುವ ಮನೆಯ ವಿಶೇಷತೆ ಏನು?

Public TV
2 Min Read

ಕೋಲಾರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ (Election) ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲಿರುವ ಸಿದ್ದರಾಮಯ್ಯಗೆ ಪಕ್ಕಾ ವಾಸ್ತು ಇರುವ ತೋಟದ ಮನೆಯೊಂದು ಅಂತಿಮವಾಗಿದೆ. ಸಿದ್ದರಾಮಯ್ಯ ನಿರೀಕ್ಷೆ ಮಾಡಿದಂತೆ ಎಲ್ಲಾ ಸೌಲಭ್ಯಗಳಿರುವ ಮನೆಯನ್ನು ಕಾಂಗ್ರೆಸ್ (Congress) ನಾಯಕರು ಅಂತಿಮ ಮಾಡಿದ್ದು, ವಿಪಕ್ಷ ನಾಯಕ ನಾಯಕ ಸಿದ್ದರಾಮಯ್ಯ ಕೂಡ ಒಪ್ಪಿಕೊಳ್ಳುವ ಮನೆ ಇದಾಗಿದೆ.

ಕೋಲಾರ ಹೊರವಲಯದ ಕೋಗಿಲಹಳ್ಳಿ ಬಳಿ ಇರುವ ಗಾಳಿ, ಬೆಳಕು ಹಾಗೂ ವಾಸ್ತು ಇರುವ ವಿಶಾಲವಾದ ತೋಟದ ಮನೆಯನ್ನು ಕಾಂಗ್ರೆಸ್‌ ನಾಯಕರು ಆಯ್ಕೆ ಮಾಡಿದ್ದಾರೆ. ಈ ಮನೆಯು ಕೋಲಾರ ನಗರಸಭೆ ವಾರ್ಡ್ ನಂ.6ರಲ್ಲಿರುವ ಕೋಗಿಲಹಳ್ಳಿಯ ಶಂಕರ್ ಎಂಬುವವರ ತೋಟದ ಮನೆಯಾಗಿದೆ. ಇಲ್ಲಿ ಸಣ್ಣ ಸಭೆ, ಸಮಾರಂಭ, ಪಾರ್ಕಿಂಗ್ ಸೇರಿದಂತೆ ಸಾವಿರಾರು ಜನರು ಬಂದ್ರು ನಿಭಾಯಿಸಲು ವ್ಯವಸ್ಥೆಯಿರುವುದರಿಂದ ಈ ಬಾಡಿಗೆ ಮನೆ ಇದಾಗಿದೆ.

ಸಿದ್ದರಾಮಯ್ಯ (Siddaramaiah) ಕೋಲಾರ ಕ್ಷೇತ್ರದಲ್ಲಿ ಗೆದ್ದು ಮುಖ್ಯಮಂತ್ರಿಯಾದರೆ ರಾಜ್ಯ ನಾಯಕರು ಅವರನ್ನು ಭೇಟಿಯಾಗಬೇಕಾಗುತ್ತದೆ. ರಾಜ್ಯದ ನಾಯಕರು, ಮುಖಂಡರ ದಂಡೆ ಇಲ್ಲಿಗೆ ಬರುತ್ತದೆ. ಅದರಂತೆ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಪಕ್ಷದ ಸ್ಥಳೀಯ ಮುಖಂಡರು ನಗರದ ಬೈಪಾಸ್ ರಸ್ತೆಯಲ್ಲಿರುವ ಸುಂದರ ತೋಟದ ಮನೆಯನ್ನು ಹುಡುಕಿದ್ದಾರೆ.

ಕೋಲಾರ ನಗರದ ಕುರುಬರ ಪೇಟೆ ನಿವಾಸಿ ಹಾಗೂ ಸಿದ್ದರಾಮಯ್ಯ ಅಭಿಮಾನಿ ಶಂಕರ್ 2018ರ ಈ ಮನೆಯನ್ನು ನಿರ್ಮಿಸಿ ಸುತ್ತಲೂ ತೋಟಗಾರಿಕೆ ಬೆಳೆ ಬೆಳೆದಿದ್ದಾರೆ.  ಅಷ್ಟೇ ಅಲ್ಲದೇ ಸಭೆ, ಸಮಾರಂಭ ಮಾಡಲು 35 ಗುಂಟೆ ಖಾಲಿ ಸ್ಥಳವೂ ಇದೆ. ಜೊತೆಗೆ ಗಾಳಿ, ಬೆಳಕು, ಪಾರ್ಕಿಂಗ್, ವಾಸ್ತು ಇರುವುದರ ಜೊತೆಗೆ ಹೆದ್ದಾರಿಗೆ ಹೊಂದಿಕೊಂಡಂತೆ ಮನೆ ಇದೆ. ವಿಸ್ತಾರವಾದ ಪ್ರದೇಶದ ತೋಟದ ಮನೆ, ಕಾಂಪೌಂಡ್ ಇರುವ ಮನೆಯನ್ನು ಸಿದ್ದರಾಮಯ್ಯರಿಗೆ ಫಿಕ್ಸ್ ಮಾಡಲಾಗಿದೆ.

ಹೈ-ಕಮಾಂಡ್ ಒಪ್ಪಿದ್ರೆ ಕೋಲಾರದಿಂದಲೇ ಸ್ಪರ್ಧೆ ಮಾಡುವೆ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಣೆ ಬೆನ್ನಲ್ಲೆ ಅವರು ಕೋಲಾರದಲ್ಲಿ ಉಳಿದುಕೊಳ್ಳಲು, ಕೋಲಾರ ಕ್ಷೇತ್ರದಿಂದ ಗೆದ್ದರೆ ಜನರ ಕೈಗೆ ಸಿದ್ದರಾಮಯ್ಯ ಸಿಗಬೇಕಾದ್ರೆ ಒಂದು ಮನೆ ಅವಶ್ಯಕತೆ ಇತ್ತು. ಅದರಂತೆ ಸಿದ್ದರಾಮಯ್ಯ ಅಭಿಮಾನಿ ಕೋಗಿಲಹಳ್ಳಿ ಶಂಕರ್ ಅವರ 1 ಎಕರೆ ಪ್ರದೇಶದಲ್ಲಿರುವ ಸುಂದರ ಮನೆಯಲ್ಲಿ 1 ಹಾಲ್, 2 ಪ್ರತ್ಯೇಕ ಕೊಠಡಿ, ವಿಶಾಲವಾದ ಅಡುಗೆ ಮನೆ, ದೇವರ ಮನೆ, ಮನೆಯ ಮೊದಲ ಅಂತಸ್ತಿನಲ್ಲಿ 1 ರೂಂ ಸಹ ಇದೆ.

ಸಿದ್ದರಾಮಯ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರು ನಿರೀಕ್ಷೆ ಮಾಡಿದಂತೆ ಮನೆಯಿದ್ದು, ಇನ್ನೂ ಬಾಡಿಗೆ ವಿಚಾರ ಮಾತನಾಡಿಲ್ಲ. ಸಿದ್ದರಾಮಯ್ಯ ಅವರು ಬಂದ್ರೆ 5 ಸಾವಿರ ರೂ. ಹೆಚ್ಚು ಕಡಿಮೆಯಾದ್ರು ಸಹ ಬಾಡಿಗೆ ಕೊಡುವುದಾಗಿ ಮನೆಯ ಮಾಲೀಕ ಶಂಕರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಒಟ್ಟಿನಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋ ಸಾವಿರಾರು ಪ್ರಶ್ನೆಗಳ ಮಧ್ಯೆ ಅವರ ಮನೆ ಕೂಡ ಸಾಕಷ್ಟು ಕುತೂಹಲ ಕೆರಳಿಸಿತ್ತು. ಅದರಂತೆ ಸಿದ್ದರಾಮಯ್ಯ ಗೆದ್ದ ಬಳಿಕ ಜನ ಸಂಪರ್ಕಕ್ಕೆ ಸಿಗುವ, ಸಭೆ ಮಾಡಲು, ಮುಖಂಡರನ್ನ ಮಾತನಾಡಿಸಲು ಬೇಕಾದ ತೋಟದ ಮನೆಯೊಂದು ಅಂತಿಮವಾಗಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *