ಈ ಬಾರಿಯೂ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆ? – ಏನಿದು ತಂತ್ರಗಾರಿಕೆ?

Public TV
2 Min Read

ಬೆಂಗಳೂರು: ಈ ಬಾರಿ ಚಾಮುಂಡೇಶ್ವರಿ, ಬಾದಾಮಿಯಲ್ಲಿ ಸ್ಪರ್ಧಿಸಿದ್ದಂತೆ ಈ ಬಾರಿಯೂ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಐದು ದಿನಗಳ ಹಿಂದೆ ಮಾತನಾಡಿದ್ದ ಸಿದ್ದರಾಮಯ್ಯ (Siddaramaiah) ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಕೋಲಾರದಿಂದ (Kolara) ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದರು. ಹೈಕಮಾಂಡ್ ಒಪ್ಪಿಗೆ ಕೊಟ್ಟರೇ, ಟಿಕೆಟ್ ಕೊಟ್ಟರೇ ಎಂಬ ಮಾತನ್ನು ಸಿದ್ದರಾಮಯ್ಯ ಪದೇ ಪದೇ ಒತ್ತಿ ಹೇಳಿದ್ದರು. ಈ ವಿಚಾರ ಅದೇ ದಿನ ಚರ್ಚೆಗೆ ಗ್ರಾಸವಾಗಿತ್ತು. ಈಗ ಚಿಕ್ಕಮ್ಮದೇವಿಯ ದೈವವಾಣಿ ವೈರಲ್ ಆದ ನಂತರ ಈ ಮಾತಿಗೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿದೆ.

ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಅಂತಿಮ ಅಲ್ವಾ? ಕಳೆದ ಬಾರಿಯಂತೆ ಈ ಚುನಾವಣೆಯಲ್ಲೂ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬಹುದು ಎಂಬ ಊಹೆಗೆ ಪೂರಕ ಎಂಬಂತೆ ಶಾಸಕ ಯತೀಂದ್ರ (Yathindra Siddaramaiah) ಇವತ್ತು ಮಹತ್ವದ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಒಂದೇ ಕಡೆ ನಿಂತ್ರೆ ಬಲವಿಲ್ಲ; ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು – ಸಿದ್ದುಗೆ ರಾಜಕೀಯ ಭವಿಷ್ಯ ನುಡಿದ ಮನೆ ದೇವರು

ಕೋಲಾರ ಕ್ಷೇತ್ರ ಘೋಷಣೆ ಅಂತಿಮವಲ್ಲ, ವರುಣಾ (Varuna) ಕ್ಷೇತ್ರಕ್ಕೂ ಬರಬಹುದು. ಎಲ್ಲಾ ವಿರೋಧಿಗಳು ಒಟ್ಟಾಗಿ ಅಪವಿತ್ರ ಮೈತ್ರಿ ಮಾಡಿಕೊಳ್ಳುವ ಅಪಾಯವಿದೆ. ವರುಣಾದಲ್ಲಿ ಸ್ಪರ್ಧಿಸಲಿ ಎಂಬುದು ನನ್ನ ಬಯಕೆ ಎಂದು ಯತೀಂದ್ರ ಹೇಳಿದ್ದಾರೆ.

ಸಿದ್ದು `ಡಬಲ್’ ತಂತ್ರಕ್ಕೆ ಕಾರಣಗಳೇನು?
ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲೇಬೇಕೆಂದು ಜೆಡಿಎಸ್, ಬಿಜೆಪಿ ಪಣ ತೊಟ್ಟಿದ್ದು ಪ್ರತಿಷ್ಠೆಯ ವಿಷಯವಾಗಿದೆ. ಹೀಗಾಗಿ ಜೆಡಿಎಸ್, ಬಿಜೆಪಿ ಒಳ ಮೈತ್ರಿ ಮಾಡಿಕೊಂಡು ಹೊಡೆತ ನೀಡುವ ಭಯ ಸಿದ್ದರಾಮಯ್ಯಗೆ ಎದುರಾಗಿದೆ. ಕೋಲಾರ ಮತ್ತೊಂದು ಚಾಮುಂಡೇಶ್ವರಿ ಉಪ ಸಮರದಂತಾಗುವ ಭೀತಿ ಸೃಷ್ಟಿಯಾಗಿದೆ.

ಕೋಲಾರ ಜಿಲ್ಲಾ ಕಾಂಗ್ರೆಸ್‍ನಲ್ಲಿರಮೇಶ್‍ಕುಮಾರ್, ಕೆಹೆಚ್ ಮುನಿಯಪ್ಪ ಮಧ್ಯೆ ವೈಮನಸ್ಸು ಇಲ್ಲ ಎಂದು ನಾಯಕರು ಹೇಳುತ್ತಿದ್ದಾರೆ. ಆದರೆ ಶಮನ ಬಗೆ ಹರಿದಿಲ್ಲ ಎಂಬ ಮಾತು ವ್ಯಕ್ತವಾಗುತ್ತಿದೆ. ಒಂದು ವೇಳೆ ಚುನಾವಣೆಯ ವೇಳೆ ಶಮನ ಬಗೆ ಹರಿಯದೇ ಇದ್ದರೆ ಸಿದ್ದರಾಮಯ್ಯನವರಿಗೆ ಇದೇ ತಿರುಗುಬಾಣವಾಗುವ ಸಾಧ್ಯತೆಯಿದೆ.

ಕೋಲಾರದಲ್ಲಿ ಅಹಿಂದ ಮತಗಳು ಕಾಂಗ್ರೆಸ್‌ಗೆ ಬರುತ್ತದೆ ಎಂಬ ನಂಬಿಕೆ ಇಲ್ಲ. ಹೀಗಾಗಿ ಕೋಲಾರ ಜೊತೆಗೆ ವರುಣಾ ಅಥವಾ ಬಾದಾಮಿಯಲ್ಲಿ ನಿಲ್ಲಲು ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಒಂದು ಕಡೆ ನಿಂತರೆ ವಿರೋಧ ಜಾಸ್ತಿ ಇರುತ್ತದೆ. ಎರಡು ಕಡೆ ನಿಂತರೆ ವಿರೋಧ ಕಡಿಮೆ ಇರುತ್ತದೆ. ಈ ಕಾರಣಕ್ಕೆ ವಿರೋಧಿಗಳ ತಂತ್ರಗಾರಿಕೆ ಹತ್ತಿಕ್ಕಲು ಸಿದ್ದರಾಮಯ್ಯ `ಕೋಲಾರ’ ತಂತ್ರ ಹೂಡಿದ್ದಾರೆ. ಈ ಮೂಲಕ ವರುಣಾದಲ್ಲಿ ವಿರೋಧಿಗಳು ಒಗ್ಗೂಡುವುದನ್ನು ತಪ್ಪಿಸಲು ಸಿದ್ದು ಈ ಪ್ಲಾನ್ ಮಾಡಿರಬಹುದು ಎಂಬ ಮಾತು ಕೇಳಿ ಬಂದಿದೆ.

ಕಳೆದ ಬಾರಿ ಏನಾಗಿತ್ತು?
ವರುಣಾ ಕ್ಷೇತ್ರವನ್ನು ಯತೀಂದ್ರ ಅವರಿಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಸ್ಪರ್ಧಿಸಿದ್ದರು. ಚಾಮುಂಡೇಶ್ವರಿಯಲ್ಲಿ ಜಿಟಿ ದೇವೇಗೌಡ 36 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರೆ ಬಾದಾಮಿಯಲ್ಲಿ ಶ್ರೀರಾಮುಲು ಭಾರೀ ಸ್ಪರ್ಧೆ ನೀಡಿದ್ದರೂ ಸಿದ್ದರಾಮಯ್ಯ 1,696 ಮತಗಳ ಅಂತರದಿಂದ ಜಯಗಳಿಸಿದ್ದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *