ವಲಸಿಗರ ಘರ್ ವಾಪಸಿ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‍ಗೆ ಆತಂಕ- ಟಿಕೆಟ್ ಫೈನಲ್ ಮಾಡಲು ಪರದಾಟ

Public TV
1 Min Read

ಬೆಂಗಳೂರು: ವಲಸಿಗರ ಘರ್ ವಾಪಸಿ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‍ (Congress) ಗೆ ಮತ್ತೆ ಆತಂಕ ಎದುರಾಗಿದೆ.

ಕಾಂಗ್ರೆಸ್‍ನ ಯುಗಾದಿ ಗಡುವು ಮುಗಿದರೂ ವಲಸಿಗರು ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ಹೀಗಾಗಿ ಗೊಂದಲದಲ್ಲೇ ಟಿಕೆಟ್ (Election Ticket) ಫೈನಲ್ ಮಾಡಲು ಕೈ ಪಾಳಯ ಪರದಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಬಿಜೆಪಿಯಿಂದ ವಲಸೆ ಹೊರಡುವ ಶಾಸಕ, ಸಚಿವರನ್ನ ತಡೆಯೋರು ಯಾರು?

ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಲು ಇದೀಗ ಕಾಂಗ್ರೆಸ್ ಮುಂದಾಗಿದೆ. ವಲಸಿಗ ಸಚಿವರು ಸೇರಿದಂತೆ ಸಾಕಷ್ಟು ನಾಯಕರ ಆಗಮನದ ನೀರಿಕ್ಷೆ ಇದೆ. ಆದರೆ ಈ ವಿಚಾರದಲ್ಲಿ ನಾಯಕರು ಸರಿಯಾಗಿ ಕ್ಲಾರಿಟಿ ಕೊಟ್ಟಿಲ್ಲ. ಒಂದೆಡೆ ಅನ್ಯ ಪಕ್ಷದ ಬೇರೆ ನಾಯಕರು ಮುಖಂಡರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ.

ಇತ್ತ ನಿರೀಕ್ಷೆಯಿಟ್ಟಿದ್ದ ವಲಸಿಗರ ಸಚಿವರು, ಶಾಸಕರು ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ಕಾಯುವಂತೆಯೂ ಇಲ್ಲಾ, ಬರಲ್ಲ ಎಂದು ಮುಂದುವರಿವಂತೆಯೂ ಇಲ್ಲ. ಒಟ್ಟಿನಲ್ಲಿ ಪಕ್ಷದ ಬೆಳವಣಿಗೆ ರಾಜ್ಯದ ನಾಯಕರು ಆತಂಕದಿಂದ ದಿನ ದೂಡುವಂತೆ ಮಾಡಿದೆ ಎನ್ನಲಾಗಿದೆ.

Share This Article