ಕೈ ಟಿಕೆಟ್‌ ಆಕಾಂಕ್ಷಿಯ ಮೇಲೆ ಹಣದ ಮಳೆ ಸುರಿದ ಅಭಿಮಾನಿಗಳು

Public TV
1 Min Read

ನೆಲಮಂಗಲ: ಕಾಂಗ್ರೆಸ್ ಪಕ್ಷದ ಟಿಕೆಟ್‌ ಆಕಾಂಕ್ಷಿಯೊಬ್ಬರ (Congress Ticket aspirant) ಮೇಲೆ ಅಭಿಮಾನಿಗಳು ಹಣ ಮಳೆ (Cash Rain) ಸುರಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನೆಲಮಂಗಲ (Nelamangala) ಕಾಂಗ್ರೆಸ್ ಪಕ್ಷದ ವೀಕ್ಷಕ ಶ್ರೀನಿವಾಸ್ (Shrinivas) ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ನೆಲಮಂಗಲ ತಾಲೂಕಿನಲ್ಲಿ ಮತದಾರರಿಗೆ ಶಿವರಾತ್ರಿ ಹಬ್ಬದ ಉಡುಗೊರೆ ಎಂದು ಬೆಳಗ್ಗೆ ಕುಕ್ಕರ್‌ ಹಂಚಿಕೆ ಮಾಡಲಾಗಿದ್ದರೆ ರಾತ್ರಿ ಅಭಿಮಾನಿಗಳು ಶ್ರೀನಿವಾಸ್‌ ಮೇಲೆ ನೋಟು ಸುರಿದಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್‍ನ್ಯೂಸ್- ಮಾರ್ಚ್‍ನಲ್ಲಿ 7ನೇ ವೇತನ ಆಯೋಗದ ಶಿಫಾರಸು ಜಾರಿ

ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲು ಶ್ರೀನಿವಾಸ್‌ ಕಸರತ್ತು ಮಾಡುತ್ತಿದ್ದಾರೆ. ಅವರೇ ಅಭಿಮಾನಿಗಳಿಗೆ ದುಡ್ಡು ಕೊಟ್ಟಿದ್ದಾರೆ. ಮತದಾರರನ್ನ ತನ್ನತ್ತ ಸೆಳೆಯಲು ಮತ್ತು ಪ್ರಚಾರಕ್ಕಾಗಿ ಈ ಕೆಲಸ ಮಾಡಿದ್ದಾರೆ ಎಂಬ ಟೀಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
1 Comment

Leave a Reply

Your email address will not be published. Required fields are marked *