ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ಹೇಗೆ ನೀಡಲಾಗುತ್ತೆ: ಅಮಿತ್ ಶಾ ತಿಳಿಸಿದ್ರು

Public TV
1 Min Read

ಮೈಸೂರು: ಮೈಸೂರು ರಾಜವಂಶಸ್ಥರ ಜೊತೆಗಿನ ಮಾತುಕತೆಯ ರಹಸ್ಯವನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಮನೆತನದವರ ಜೊತೆಗಿನ ಮಾತುಕತೆ ಸೌಹಾರ್ದತೆಯುತವಾಗಿದೆ. ಹೀಗಾಗಿ ಅವರ ಜೊತೆಯ ಮಾತುಕತೆಯನ್ನು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಟಿಕೆಟ್ ಕೊಡುವಾಗ ಅಭ್ಯರ್ಥಿಯ ಸಾರ್ವಜನಿಕ ಜೀವನವನ್ನು ಮಾನದಂಡವಾಗಿ ಬಳಸುತ್ತೇವೆ. ಕರ್ನಾಟಕದಲ್ಲಿ ನಮಗೆ ಚುನಾವಣೆ ಎದುರಿಸೋಕೆ ಯಾವುದೇ ಕಷ್ಟ ಇಲ್ಲ. 21 ರಾಜ್ಯಗಳ ಚುನಾವಣೆಯಂತೆಯೂ ಇಲ್ಲಿಯೂ ಚುನಾವಣೆ ಎದುರಿಸುತ್ತೇವೆ. ಇಲ್ಲಿ ಸರಳ ಚುನಾವಣೆಯನ್ನೆ ಬಿಜೆಪಿ ಎದುರಿಸುತ್ತೇವೆ. ನಮಗೆ ಸಿದ್ದರಾಮಯ್ಯನವರನ್ನು ಎದುರಿಸುವಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇಲ್ಲಿನ ಜನರೇ ನಮ್ಮ ತೀರ್ಮಾನ ಮಾಡಿದ್ದಾರೆ ಎಂದರು.

ಸಿದ್ದರಾಮಯ್ಯ ಸರ್ಕಾರ ಬದಲಾಯಿಸಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಕಾಂಗ್ರೆಸ್ ಗೆ ಭ್ರಷ್ಟಾಚಾರ ಎನ್ನುವುದು ಮೀನು ಮತ್ತು ನೀರಿನ ಸಂಬಂಧ ಇದ್ದಂತೆ. ಕಾಂಗ್ರೆಸ್ ಹೈಕಮಾಂಡ್ ಗೆ ಕರ್ನಾಟಕ ಸರ್ಕಾರದ ಎನ್ನುವುದು ಭ್ರಷ್ಟಾಚಾರದ ಎಟಿಎಂ ಇದ್ದಂತೆ ಎಂದು ಹೇಳಿ ವಾಗ್ದಾಳಿ ನಡೆಸಿದರು.

ಮೈಸೂರು ಭಾಗದಲ್ಲಿ ನಾವು ಒಂದು ಸೀಟು ಗೆದ್ದಿಲ್ಲ. ಹೀಗಾಗಿ ಈ ಬಾರಿ ಹೆಚ್ಚು ಗಮನ ಹರಿಸಿರುವುದು ನಿಜ. ಈ ಬಾರಿ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಅನಂತ್‍ಕುಮಾರ್, ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್, ಮಾಜಿ ಸಚಿವ ಆರ್.ಅಶೋಕ್, ಸಿಟಿ.ರವಿ, ಸಂಸದ ಪ್ರತಾಪ್ ಸಿಂಹ ಉಪಸ್ಥಿತರಿದ್ದರು.

ದೇವಾಲಯಕ್ಕೆ ಭೇಟಿ: ಮೈಸೂರು ಅರಮನೆ ಮುಂಭಾಗದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯಕ್ಕೆ  ಹನುಮಜಯಂತಿ ಹಿನ್ನೆಲೆಯಲ್ಲಿ ಭೇಟಿ ನೀಡಿದರು.  ಎಲ್ಲೆ ಹೋದರೂ ಪ್ರತಿ ಶನಿವಾರ ಆಂಜನೇಯ ದೇವಾಲಯಕ್ಕೆ  ಅಮಿತ್ ಶಾ ಭೇಟಿ ನೀಡುತ್ತಿದ್ದು, ಈ ವೇಳೆ ಹಲವು ಬಿಜೆಪಿ ನಾಯಕರು ಸಾಥ್ ನೀಡಿದರು.

 

 

Share This Article
Leave a Comment

Leave a Reply

Your email address will not be published. Required fields are marked *