ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕೋಲಾರದ ಅಖಾಡಕ್ಕೆ ಧುಮುಕಿದ್ದು ಚುನಾವಣೆ ಎದುರಿಸುವ ಹುಮ್ಮಸ್ಸಿನ್ನಲ್ಲಿದ್ದಾರೆ. ಆಂತರಿಕ ಸಮೀಕ್ಷೆ, ಸಮೀಕರಣಗಳನ್ನ ಮಾಡಿರುವ ಸಿದ್ದರಾಮಯ್ಯ ಅಳೆದು ತೂಗಿ ಕೋಲಾರ ಸ್ಪರ್ಧೆ ಖಚಿತಗೊಳಿಸಿದ್ದಾರೆ. ಈ ಮಧ್ಯೆ ಉತ್ತರ ಕರ್ನಾಟಕದಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ಬ್ಯುಸಿಯಾಗಿರುವ ಸಿದ್ದರಾಮಯ್ಯಗೆ ಅಹಿಂದ ನಾಯಕರ ತಂಡವೊಂದು ಕೊಟ್ಟಿರುವ ರಿಪೋರ್ಟ್ ಕೈ ಸೇರಿದೆ. ಇದರಲ್ಲಿ ಸದ್ಯದ ಲೆಕ್ಕಾಚಾರಗಳ ಪ್ರಕಾರ ಕೋಲಾರ (Kolar Constituency) ದಲ್ಲಿ ಸಿದ್ದರಾಮಯ್ಯ ಅಹಿಂದ ತಂತ್ರ ವರ್ಕ್ ಔಟ್ ಆಗಲ್ಲ ಅನ್ನೋದು ಬಹಿರಂಗವಾಗಿದೆ.
ವರದಿಯಲ್ಲೇನಿದೆ..?: ಕಾಂಗ್ರೆಸ್ಗೆ ಕೋಲಾರ ಕ್ಷೇತ್ರದಲ್ಲಿ ಬೂತ್ ಮಟ್ಟದ ನಾಯಕರಿಲ್ಲ. ವೋಟ್ ಕೃಡೀಕರಿಸುವ ಬೂತ್ ಮಟ್ಟದ ನಾಯಕರ ಕೊರತೆ ಇದೆ. ಅಹಿಂದ ಮತಗಳು ಚದುರಿ ಹೋಗಿವೆ. 2 ಲಕ್ಷ 31 ಸಾವಿರ ಮತಗಳಲ್ಲಿ 1ಲಕ್ಷ 70 ಸಾವಿರ ಅಹಿಂದ ಮತಗಳು ವಿಭಜನೆಯಾಗಿ ಜೆಡಿಎಸ್-ಬಿಜೆಪಿ ಪಾಲಾಗಿವೆ. ಅಹಿಂದ ಮತಗಳನ್ನೆ ನಂಬಿಕೊಂಡರೇ ಸಿದ್ದರಾಮಯ್ಯ ಗೆಲುವು ಕಷ್ಟವಾಗುವ ಸಾಧ್ಯತೆಗಳನ್ನು ತಿಳಿಸಲಾಗಿದೆ. ಇದನ್ನೂ ಓದಿ: ಹೆಚ್ಡಿಕೆ ಲಾಕ್ ಮಾಡಲು ಸಿದ್ದರಾಮಯ್ಯ ದಾಳ- ಚನ್ನಪಟ್ಟಣದಿಂದ ರಮ್ಯಾ ಕಣಕ್ಕಿಳಿಸಲು ಚಿಂತನೆ
ಸಿದ್ದರಾಮಯ್ಯ ಕೋಲಾರ ಕ್ಷೇತ್ರ ಘೋಷಣೆ ಬೆನ್ನಲ್ಲೆ ಫುಲ್ ಅಲರ್ಟ್ ಆಗಿರುವ ಜೆಡಿಎಸ್ (JDS) ಹಾಗೂ ಬಿಜೆಪಿ (BJP) ಅಹಿಂದ ಮತಗಳನ್ನ ಚದುರಿಸಲು ರಣ ತಂತ್ರ ರೂಪಿಸಿದ್ದಾರೆ. ಈಗಾಗಲೇ ದಲಿತ ವಿರೋಧಿ ಸಿದ್ದರಾಮಯ್ಯ ಅನ್ನೋ ಹಣೆಪಟ್ಟಿ, ಮುಸ್ಲಿಂ ವಿರೋಧಿ ಅನ್ನೋ ಸಂದೇಶವನ್ನ ವಿರೋಧ ಪಕ್ಷಗಳು ಸಾರುತ್ತಿವೆ. ಆದರೆ ಅಹಿಂದಾ ಅಜೆಂಡಾ ಮೂಲಕ ತಳ ಸಮುದಾಯಗಳ ಜನರ ಮನವೊಲಿಸುವ ಕಾರ್ಯಕ್ಕೆ ಇದುವರೆಗೂ ಯಾವುದೆ ಕಾಂಗ್ರೆಸ್ ಮುಖಂಡರು ಮುಂದಾಗಿಲ್ಲ. ಅದರಂತೆ ಕುರುಬರು ಸೇರಿದಂತೆ ಅಲ್ಪ ಸಂಖ್ಯಾತರು, ದಲಿತರು ಸಿದ್ದರಾಮಯ್ಯ ಪರವಾಗಿಲ್ಲ ಅನ್ನೋ ಆಂತರಿಕ ವರದಿ ಕೂಡ ಸಿದ್ದರಾಮಯ್ಯ ಪಾಲಿಗೆ ಆತಂಕ ಹೆಚ್ಚಿಸಿದೆ. ಈ ಮಧ್ಯೆ ಕೋಲಾರದಲ್ಲಿ ಸಿದ್ದರಾಮಯ್ಯನವರ ಅಂತ್ಯ ಆಗಲಿದೆ ಅಂತ ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದ್ದಾರೆ.
ಒಟ್ಟಿನಲ್ಲಿ ಮಾಸ್ ಲೀಡರ್, ಅಹಿಂದ ನಾಯಕ ಎನ್ನುವ ಸಿದ್ದರಾಮಯ್ಯ ಅಹಿಂದಾ ದಾಳ ಉರುಳಿಸಿ ಗೆಲ್ಲುವ ವಿಶ್ವಾಸದಲ್ಲಿದ್ರು. ಆದರೆ ಅಹಿಂದಾ ಮತದಾರರೆ ಇಲ್ಲಿ ನಿರ್ಣಾಯಕವಾಗಿದ್ದು, ಅಲ್ಪ ಸಂಖ್ಯಾತರು, ದಲಿತರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಅಹಿಂದಾ ಡ್ಯಾಮೇಜ್ ಕಂಟ್ರೋಲ್ ಆಗದೆ ಇದ್ರೆ ಕಷ್ಟ ಅನ್ನೋದು ಸದ್ಯದ ಸ್ಥಿತಿ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k