ರೆಸಾರ್ಟಿನಲ್ಲಿ ಗನ್ ಕಿತ್ತುಕೊಳ್ಳಲು ಗನ್ ಮ್ಯಾನ್ ಕಿವಿ ಕಚ್ಚಿ ಕಿತ್ತಾಡಿದ ಗಣೇಶ್!

Public TV
1 Min Read

ಬೆಂಗಳೂರು: ಕಾಂಗ್ರೆಸ್ ಶಾಸಕರ ಈಗಲ್ ಟನ್ ರೆಸಾರ್ಟ್ ಮಾರಾಮಾರಿ ಪ್ರಕರಣ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದ್ದು, ಕಂಪ್ಲಿ ಶಾಸಕ ಗನ್ ಮ್ಯಾನ್ ಕಿವಿ ಕಚ್ಚಿದ್ದಾರೆ ಎನ್ನುವ ವಿಚಾರ ಪಕ್ಷದ ಮೂಲಗಳಿಂದ ಲಭ್ಯವಾಗಿದೆ.

ಗನ್ ಮ್ಯಾನ್ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ರಹಸ್ಯವಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಗನ್ ಮ್ಯಾನ್ ಯಾವುದೇ ಠಾಣೆಗೆ ದೂರು ನೀಡಿಲ್ಲ. ಅಷ್ಟೇ ಅಲ್ಲದೆ ಈ ವಿಚಾರ ಯಾರಿಗೂ ಗೊತ್ತಾಗಂತೆ ನಾಯಕರು ಪ್ಲಾನ್ ಮಾಡಿದ್ದಾರೆ.

ಆಗಿದ್ದೇನು?:
ಮದ್ಯದ ಮತ್ತಿನಲ್ಲಿದ್ದ ಶಾಸಕರಾದ ಆನಂದ್ ಸಿಂಗ್ ಹಾಗೂ ಗಣೇಶ್ ಜೋರಾಗಿ ಕಿತ್ತಾಡಿಕೊಳ್ಳುತ್ತಿದ್ದರು. ಈ ವೇಳೆ ಹೊರ ನಿಂತಿದ್ದ ಗನ್ ಮ್ಯಾನ್ ಒಳಗೆ ಬಂದಿದ್ದಾನೆ. ತಕ್ಷಣವೇ ಗನ್ ಮ್ಯಾನ್ ಬಳಿಗೆ ತೆರಳಿದ ಕಂಪ್ಲಿ ಶಾಸಕ ಗಣೇಶ್ ಗನ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಆದರೆ ಗನ್ ನೀಡಲು ಗನ್ ಮ್ಯಾನ್ ನಿರಾಕರಿಸಿದ್ದರಿಂದ ಕೋಪಗೊಂಡ ಶಾಸಕರು ಆತನ ಕಿವಿ ಕಚ್ಚಿ, ಮುಖವನ್ನು ಪರಚಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ.  ಇದನ್ನೂ ಓದಿ: ಆನಂದ್ ಸಿಂಗ್-ಗಣೇಶ್ ನಡುವಿನ ‘ಬಾಟಲ್’ ಬ್ಯಾಟಲ್ – ರಾತ್ರಿ ನಿಜವಾಗಿ ಏನಾಯ್ತು? ಇಲ್ಲಿದೆ ಇನ್‍ಸೈಡ್ ಸ್ಟೋರಿ

ಗನ್ ಮ್ಯಾನ್ ಮೇಲಾಗುತ್ತಿದ್ದ ಹಲ್ಲೆ ತಡೆಯಲು ಮುಂದಾದ ಆನಂದ್ ಸಿಂಗ್ ಅವರ ಮೇಲೆ ಗಣೇಶ್ ಮದ್ಯದ ಬಾಟಲ್‍ನಿಂದ ಹೊಡೆದಿದ್ದಾರೆ. ಅದೃಷ್ಟವಶಾತ್ ಗನ್ ಮ್ಯಾನ್ ಹಾಗೂ ಆನಂದ್ ಸಿಂಗ್ ಸ್ಪಲ್ಪದರಲ್ಲಿಯೇ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *