ಸೋಲಿನ ಬೇಸರ- ಜನರ ಮೇಲೆ ಮುನಿಸಿಕೊಂಡ ದಳಪತಿ?

Public TV
1 Min Read

ಬೆಂಗಳೂರು: ಚುನಾವಣೆ ಸೋಲು ಒಬ್ಬೊಬ್ಬರಿಗೆ ಸಿಕ್ಕಾಪಟ್ಟೆ ನೋವು ಕೊಟ್ಟು ಬಿಡುತ್ತದೆ. ಈ ಸೋಲಿನ ನೋವು ಈಗ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೂ ತಟ್ಟಿದೆ. ಈ ನೋವನ್ನ ಅದ್ಯಾಕೋ ಕುಮಾರಸ್ವಾಮಿ ಜನರ ಮೇಲೆ ತೀರಿಸಿಕೊಳ್ತಿದ್ದಾರಾ ಅನ್ನೊ ಅನುಮಾನಗಳು ಬಲವಾಗಿ ಕೇಳಿ ಬರ್ತಿವೆ.

ಇಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ 60ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ರಾಜಕೀಯ ನಾಯಕರು ಅದರಲ್ಲೂ ಮಾಜಿ ಸಿಎಂ, ಜೆಡಿಎಸ್ ಅಧಿಪತಿ ಕುಮಾರಸ್ವಾಮಿ ಬರ್ತ್ ಡೇ ಸೆಲೆಬ್ರೇಷನ್ ಅಂದ್ರೆ ಕೇಳಬೇಕಾ? ಅಭಿಮಾನಿಗಳ ದಂಡು, ಜೈಕಾರ, ಹಾರ-ತೂರಾಯಿ ಇವೆಲ್ಲ ಇರಲೇಬೇಕು. ಆದರೆ ಅದ್ಯಾಕೋ ಕುಮಾರಸ್ವಾಮಿ ಅವರು ಈ ಬಾರಿಯ ಬರ್ತ್ ಡೇ ಸೆಲೆಬ್ರೇಷನ್ ಬೇಡ ಅಂತ ಡಿಸೈಡ್ ಮಾಡಿ ಜನರಿಂದನೇ ದೂರ ಆಗಿದ್ದಾರೆ.

ಹುಟ್ಟುಹಬ್ಬ ಅಂತ ಗೊತ್ತಿದ್ರು ಕುಮಾರಸ್ವಾಮಿ ಜನರ ಮಧ್ಯೆ ಇರದೇ ಗೋವಾ ಪ್ರವಾಸಕ್ಕೆ ಹೋಗಿದ್ದಾರೆ. 3 ದಿನಗಳ ಗೋವಾ ಪ್ರವಾಸದಲ್ಲಿರುವ ಮಾಜಿ ಸಿಎಂ ವಿಶ್ರಾಂತಿಯಲ್ಲಿದ್ದಾರೆ. ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಗಾಗಿ ತೆರಳಿದ್ದಾರೆ ಅಂತ ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಜನರ ಮೇಲೆ ಸಿಟ್ಟಿದೆಯಂತೆ. ಹೌದು ಲೋಕಸಭೆಯಲ್ಲಿ ಮಗನ ಸೋಲು, ಉಪ ಚುನಾವಣೆಯಲ್ಲಿ ಹೀನಾಯ ಸೋಲು ಕುಮಾರಸ್ವಾಮಿ ಅವರಿಗೆ ಜನರ ಮೇಲೆ ಕೋಪ ತರಿಸಿದೆಯಂತೆ. ರೈತರ ಸಾಲಮನ್ನಾ, ಬಡವರ ಬಂಧು ಹೀಗೆ ಅಭಿವೃದ್ಧಿ ಕೆಲಸ ಮಾಡಿದ್ರು ಜನ ಕೈ ಹಿಡಿದಿಲ್ಲ. ಹೀಗಾಗಿ ಜನರ ಮಧ್ಯೆ ಹುಟ್ಟುಹಬ್ಬ ಬೇಡ ಅಂತ ಗೋವಾ ಪ್ರವಾಸ ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *